Wednesday, September 9, 2009

ಕಾರ್ನಾಡರ ಯಯಾತಿ..ಹಾಗೆ ಒಂದು ಮೆಲುಕು...


*********************************************
ಒಮ್ಮೊಮ್ಮೆ ದಾರಿಗುಂಟ ಹೋಗುವಾಗ, ನಮ್ಮ ದಾರಿ
ಒಡೆದು ಎರಡಾಗುವುದಿಲ್ಲವೇ? ನಾವು ಒಂದನ್ನು ಮಾತ್ರ ಆರಿಸಬಹುದು. ಅದರೊಡನೆ ತತ್ಪೂರ್ತ ನಮ್ಮ
ದಾರಿಯೂ ಗೊತ್ತಾಗುತ್ತದೆ.ಆದರೆ ನಮ್ಮ ಹಿಂದೆ ಕಿವಿಗಳ ಸನಿಹದಲ್ಲಿ, ಕೇಳದ ದನಿಯೊಂದು
ಪ್ರಶ್ನಿಸುತ್ತಿರುತ್ತದೆ;ಆ ಇನ್ನೊದು ದಾರಿಯಲ್ಲಿ ಹೋಗಿದ್ದರೆ ಏನಾಗುತ್ತಿತ್ತು ? ಏನೇನೋ
ಆಗಬಹುದಾಗಿತ್ತು! ಆದರೆ.....ಆ ದಾರಿಯ ಗುಟ್ಟು ಅದರೊಡನೆ ಗುಟ್ಟಾಗಿಯೇ ಉಳಿಯಬೇಕು.ನಮ್ಮ
ನೇಗಿಲನ್ನು ನಾವು ಹೊತ್ತು ಮುನ್ನಡೆಯಬೇಕು.ನಾವು ಕಟ್ಟಿದ ಅಜ್ಜಿಯ ಕಥೆಯಲ್ಲಿ ನಾವೇ ಬಾಳಬೇಕು. ಇದೇ
ಜೀವನದ ದುರಂತ ಪ್ರಯೋಗ.ಇದೇ ಆಶಾವಾದದ ಮೂಲ..

**************************************************

ನಾವೆಲ್ಲಾ ಹಾಗೆಯೇ, ದಡದ ಮೇಲೆ ಕೂತು ನದಿಯ ಹಸಿರು ತಳದ ವಿಚಿತ್ರ ವಿಶ್ವವನ್ನು ನಿರೀಕ್ಷಿಸುವ ಸ್ವಪ್ನಜೀವಿಯಂತೆ.ನದಿಯ ಪ್ರವಾಹದಲ್ಲಿ ಹಾಗುವ ವಕ್ರೀಭವನ ಪರಾವರ್ತನೆಗಳೆಲ್ಲ ನಮ್ಮ ದೃಷ್ಟಿಯ ಫಲ.ಅದನ್ನೆಲ್ಲಾ ಸತ್ಯವೆಂದು ಸ್ವೀಕರಿಸುವುದರಲ್ಲೇ ನಮ್ಮ ಆನಂದವಿದೆ,ರಸಿಕತೆಯಿದೆ.ಅಲ್ಲದೆ ನದಿಯ ತಳವನ್ನು ಸರಿಯಾಗಿ ಕಾಣಬೇಕೆಂದರೆ ನಮ್ಮ ಪ್ರತಿಬಿಂಬವನ್ನು ಅದರಲ್ಲಿ ಚೆಲ್ಲಬೇಕು.ಸತ್ಯ ನಮ್ಮ ಕಾಣ್ಕೆಯ ಬದುಕು.ಜೀವನದ ನದಿಯೆಡೆಗೆ ನಾವು ನೋಡುವಾಗ ಅದರಲ್ಲಿ ಕಾಣುವ ನಮ್ಮ ಪ್ರತಿಬಿಂಬವನ್ನು ಅದರದೇ ಭಾಗವೆಂದು ಸ್ವೀಕರಿಸುವುದೂ ನಮ್ಮ ಹೊಣೆ. ಆ ಹೊಣೆ ರಸಿಕನಿಗೂ ತಪ್ಪಿದ್ದಲ್ಲ,ವಿದ್ವಾಂಸನಿಗೂ ತಪ್ಪಿದ್ದಲ್ಲ. ಇಂಥ ಹೊಣೆಯಲ್ಲೇ ನಮ್ಮ ಜೀವನದ ಮೋಜು ಇದೆ.ಆ ಹೊಣೆಗಾರಿಕೆಯ ಶಿಲುಬೆಯನ್ನೇ ನಾವು ಹೊರಬೇಕು,ಕೊನೆಗೆ ಅದರ ಮೇಲೆಯೇ ನಾವು ತೂಗಾಡಬೇಕು.ಶಿಲುಬೆ ಹೊತ್ತು ಸಾಗುವ ನಮ್ಮ ಎದುರಿಗೆ ನಕಾಶೆಯಿಲ್ಲ,ಕವಲುದಾರಿಗಳ ಜೇಡರ ಬಲೆಯಿದೆ. ....................

****************************************************


ಇನ್ನೂ ಇದೆ ......