Wednesday, September 19, 2012

ಓದಲೇ ಬೇಕಾದ ಇಂದಿನ ಪುಸ್ತಕಗಳು"

"ವಿಜಯನಗರ ಹಾದಿ ಬೀದಿಯಲ್ಲಿ ಮಾರುತ್ತಿದ್ದ ಮುತ್ತು ರತ್ನ ನಂತರದಲ್ಲಿ ಎಲ್ಲಿಗೆ ಹೊದ್ವು?
  "ಸಿದ್ದಾರ್ಥ ನಡುರಾತ್ರಿ  ಕದ್ದೋಡಿ ಬುದ್ದನಾದಾಗ ಯಶೋಧರೆ ಮಗನೊಡನೆ ಹೆಣಗಿದ ಮನಸ್ಥಿತಿ ಹೇಗಿತ್ತು?"
     "ಅಜಂತಾ ಗುಹೆಗಳಲ್ಲೇ ಕಲ್ಲಿನಲ್ಲೇಕೆ ಕಲೆಯರಳಿಸುವ ಹುಚ್ಚು ಪ್ರಯತ್ನಕ್ಕೆ ಬೋಡು ತಲೆಯ ಬೌದ್ದರು ಪ್ರಯತ್ನಪಟ್ಟರು?"
      "ಮಾಲಂಗಿ ಮಡುವಾಗಲಿ ಎಂದು ಶಾಪಕೊಟ್ಟು ಇದ್ದ ಮಡುವಿಗೇ ಬಿದ್ದ ಅಲಮೇಲಮ್ಮನ ಶಾಪಕ್ಕೆ  ಸಿಕ್ಕ ಸಾರ್ಥಕತೆ ಏನು?
       "ಪಟ್ಟದ ರಾಣಿ ಶಾಂತಲೆ ಬೇಲೂರು ಶಿಲ್ಪಕಲೆಗಾಗಿ ಶಿಲ್ಪಿಗಳ ಎದುರಿನಲ್ಲೇ ಆ ಪರಿ ಸೊಬಗಿನಲ್ಲಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಏನಿತ್ತು?"
"ಸಾರನಾಥದ ಅಶೋಕ ಸ್ಥಂಬದಲ್ಲಿ ಸಿಂಹಗಳಂತೂ ಇದ್ದವು.. ಆದರೆ ಒಂದು ಹೆಣ್ಣಿನ ಆಕ್ರೋಶಕ್ಕೆ ಬಲಿಯಾದವು". 


ಬಹಳ ವರ್ಷಗಳಿಂದ ನನ್ನೊಳಗೇ ತೊಳಲಾಡುತ್ತಿದ್ದ ಹಲವು ಪ್ರಶ್ನೆಗಳಿಗೆ ಇಂದು ಉತ್ತರ ಸಿಕ್ಕಿದೆ. "ಇದ ಮಿತ್ತಂ"   ಅನ್ನುವಂತಿಲ್ಲದಿದ್ದರೂ ಮನಸ್ಸಿನ ಬಿರುಗಾಳಿ ಶಾಂತವಾಗುವಷ್ಟು.  ನಿಮಗೂ ಹಲವುಬಾರಿ ಮನಸ್ಸಿನಲ್ಲಿ ಈ ಪ್ರಶ್ನೆ ಖಂಡಿತಾ ಮೂಡಿರುತ್ತದೆ. ಉತ್ತರ ಬೇಕಾದಲ್ಲಿ ಓದಿ ಕನ್ನಡದ "ಡಾವಿಂಚಿ ಕೋಡ್ "  ಎಂದೇ ಪ್ರಖ್ಯಾತವಿರುವ  ಕೆ.ಎನ್.ಗಣೇಶಯ್ಯನವರ 

       


"ಭಾವನೆಗಳ ಎರಕ ನಮ್ಮ ಗಣಪ"

ಆಸ್ತಿಕರ ಅನನ್ಯ ಆಸ್ತಿ, ನಾಸ್ತಿಕರ ನಿರಾಕರಣದ ಮುಕುಟ "ಗಣು ಮಾಮನ" ಹಬ್ಬ ಮತ್ತೊಮ್ಮೆ ಜನಮಾನಸದ ಮನದಂಗಳದಲ್ಲಿ. "Blasphemy"ಹೆಸರಿನಲ್ಲಿ ಜಗತ್ತೆಲ್ಲಾ ಹೊತ್ತಿ ಉರಿಯುತ್ತಿರುವ ವೇಳೆಯಲ್ಲಿ ಭಾವನೆಗಳ ಎರಕದಲ್ಲಿ ಮಿಂದೆದ್ದ ಗಣಪ. 

  

ಮತ್ತೆಂದೂ ಮಹಾಭಾರತದ Sequels ಆಗಲಿ Prequels  ಆಗಲಿ ಬರೆಯನೆಂದು ವೇದವ್ಯಾಸರಿಗೆ ಸೆಡ್ಡು ಹೊಡೆದು ಕೆರಳಿದ ಸಿಂಹದಂತಿರುವ ಮಕ್ಕಳ ಗಣು ಮಾಮ, ಯುವಕರ "ಗಣೇಶ ಬಪ್ಪ ಮೊರಯಾ", ಹಿರಿಯರ ಗಣೇಶಪ್ಪ ಇಂದಿನಿಂದ ದಿನಗಳ ಲೆಕ್ಕದಲ್ಲಿ ನಮ್ಮೊಡನೆ ನಮ್ಮವನಾಗಿ ನಮ್ಮ ಅನುಕೂಲಕ್ಕೆ ತಕ್ಕಂತೆ ತೃಪ್ತನಾಗಿ ಹರಸುವ ಸುವರ್ಣಕಾಲ.
ದೇವರ ಹೆಸರಿನಲ್ಲಿ ಹೃದಯದ ಬಾಗಿಲಿಗೆ ಬೀಗಗಳನ್ನು ಬಡಿದು ಪರಸ್ಪರ ಯುದ್ದ ಸಾರಿರುವ ಮನುಕುಲಕ್ಕೆ ಗಣು ಮಾಮ ಸೌಹಾರ್ದತೆಯ ನೈತಿಕ ಪಾಠ ಹೇಳುವ ಸಮಯ ಬಂದಿದೆ. ಕೇಳುವ ತಾಳ್ಮೆ ನಮ್ಮಲ್ಲಿರಬೇಕಷ್ಟೇ!!