ಒಂದು ವರ್ಷ ಅನುಭವದಲ್ಲಿ ಪಕ್ವತೆಗಳಿಸಿದ್ದಕ್ಕೆ ಖುಷಿಪಡಬೇಕೋ, ಬದುಕಿನ ಮುತ್ತಿನ ಹಾರದಲ್ಲಿ ಒಂದು ಮುತ್ತು ಕಮ್ಮಿಯಾಗಿದ್ದಕ್ಕೆ ಕಸಿವಿಸಿಪಡಬೇಕೋ... ಅರ್ಥವಿಲ್ಲದ ಆಲಾಪ.
"ಒಳ್ಳೆ ಕ್ಷಣಗಳ ಕೂಡಿಡಬೇಕು, ಬದುಕಿನ ನೆನಪಿಗೆ, ಋತುಗಳ ಜೂಟಾಟಕೆ"
ಬರುವ ಮನ್ವಂತರ ಬಳಲಿದ ಮನಗಳಿಗೆ ಹೊಸ ಚೇತನವನ್ನು ತರಲಿದೆಯೆಂಬ ಭರವಸೆಯಲ್ಲಿ
ಹಾರೈಕೆಯೊಂದಿಗೆ,
ನಿಮ್ಮ
ಅವಿ