ಬದಲಾವಣೆಯ ಗಾಳಿ ಬೀಸಲು ಇಷ್ಟು ಕಾಲ ಬೇಕಿತ್ತು.
2009ರ ಇಳಿ ಸಂಜೆ ನಾನು ಪ್ರಕಟಿಸಿದೆ "ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ" ಅನ್ನುವ ಮಾತಿಗೆ ಇದೇ 13ರ ಶುಭ ಮುಂಜಾನೆಯಂದು ತೆರೆಬೀಳುತ್ತಿದೆ.
ನಮ್ಮ ಕನಸಿನರಮನೆ "ಮನ್ವಂತರ" ನಮ್ಮ ಬಾಳುಗಳಲ್ಲೂ ಬದಲಾವಣೆಯ ತಂಗಾಳಿ ತರುವುದೆಂಬ ನಿರೀಕ್ಷೆಯೊಂದಿಗೆ ಭಾನುವಾರದ ಬೆಳಗ್ಗಿನ 7:30ರ ಚುಮ್ಮು ಚುಮ್ಮು ಚಳಿಯಲ್ಲಿ ಗೃಹ ಪ್ರವೇಶ ಮಾಡುವ ಹುನ್ನಾರದಲ್ಲಿದ್ದೇವೆ. :-)
ಹತ್ತು ಗುಂಡಿ ತೊಡುವ ಬದಲು ಒಂದು ಬಾವಿ ತೋಡುವ ಪೆದ್ದು ನಾನು. ಇರುವ ಬೆರಳೆಣಿಕೆಯಷ್ಟುಗೆಳೆಯರ ಫೋನ್ ನಂಬರ್ ಇಟ್ಟುಕೊಳ್ಳಬೇಕೆನ್ನುವ ಕಾಮನ್ ಸೆನ್ಸ್ ಕೂಡ ಇಲ್ಲದ ಪಂಜುರ್ಲಿ. ಪರಿವರ್ತನೆಯ ಸೊಬಗಿಗೆ ನಮ್ಮವರೆನಿಸಿಕೊಂಡ ನೀವಿಲ್ಲದಿದ್ದರೆ ನಿಜಕ್ಕೂ ನಾವು ನಾವಾಗಿರುವುದಿಲ್ಲ.. ಇಂಥ ಹುಸಿ ಕೋಪದ ನಾಟಕದೊಂದಿಗೆ ನಿಮಗೆಲ್ಲರಿಗೂ ಆಮಂತ್ರಣವೀಯುತ್ತಿದ್ದೇನೆ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ.........
2009ರ ಇಳಿ ಸಂಜೆ ನಾನು ಪ್ರಕಟಿಸಿದೆ "ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯ ಇಲ್ಲ" ಅನ್ನುವ ಮಾತಿಗೆ ಇದೇ 13ರ ಶುಭ ಮುಂಜಾನೆಯಂದು ತೆರೆಬೀಳುತ್ತಿದೆ.
ನಮ್ಮ ಕನಸಿನರಮನೆ "ಮನ್ವಂತರ" ನಮ್ಮ ಬಾಳುಗಳಲ್ಲೂ ಬದಲಾವಣೆಯ ತಂಗಾಳಿ ತರುವುದೆಂಬ ನಿರೀಕ್ಷೆಯೊಂದಿಗೆ ಭಾನುವಾರದ ಬೆಳಗ್ಗಿನ 7:30ರ ಚುಮ್ಮು ಚುಮ್ಮು ಚಳಿಯಲ್ಲಿ ಗೃಹ ಪ್ರವೇಶ ಮಾಡುವ ಹುನ್ನಾರದಲ್ಲಿದ್ದೇವೆ. :-)
ಹತ್ತು ಗುಂಡಿ ತೊಡುವ ಬದಲು ಒಂದು ಬಾವಿ ತೋಡುವ ಪೆದ್ದು ನಾನು. ಇರುವ ಬೆರಳೆಣಿಕೆಯಷ್ಟುಗೆಳೆಯರ ಫೋನ್ ನಂಬರ್ ಇಟ್ಟುಕೊಳ್ಳಬೇಕೆನ್ನುವ ಕಾಮನ್ ಸೆನ್ಸ್ ಕೂಡ ಇಲ್ಲದ ಪಂಜುರ್ಲಿ. ಪರಿವರ್ತನೆಯ ಸೊಬಗಿಗೆ ನಮ್ಮವರೆನಿಸಿಕೊಂಡ ನೀವಿಲ್ಲದಿದ್ದರೆ ನಿಜಕ್ಕೂ ನಾವು ನಾವಾಗಿರುವುದಿಲ್ಲ.. ಇಂಥ ಹುಸಿ ಕೋಪದ ನಾಟಕದೊಂದಿಗೆ ನಿಮಗೆಲ್ಲರಿಗೂ ಆಮಂತ್ರಣವೀಯುತ್ತಿದ್ದೇನೆ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ.........
ಅನ್ನಪೂರ್ಣೇಶ್ವರಿ ನಗರ [ಕ್ಯಾತನಗೆರೆ ಲೇಔಟ್]
ಸೇಂಟ್. ಥಾಮಸ್ ಹೈ ಸ್ಕೂಲ್ ಹಿಂಭಾಗ.
ಚಾನಲ್ ರೋಡ್.
ಮಂಡ್ಯ-01
ನಕ್ಷೆ: