Tuesday, October 5, 2010



ನೀನು ಹೊಲಸು ತಿಂದಿದ್ದೀಯಾ.. ನಿನ್ನ ಜನ ಹೊಲಸನ್ನು ನಾಯಿ-ಹಂದಿಗಳೂ ನಾಚುವಂತೆ ಮುಕ್ಕುತ್ತಿದ್ದಾರೆ.. ಮೂರೂ ಬಿಟ್ಟ ಯಡ್ಡಿ ಸ್ವಲ್ಪ ಜನದ ಕಡೆನೂ ನೋಡಿ ಅಂತ ಆಧಾರ ಸಮೇತ ಅವರ ಹೊಲಸು ಪ್ರೀತಿ ಹಾಗೂ ಸ್ವಜನರಿಗೂ ತಿನ್ನಿಸುವ ಪ್ರೇಮ ಕಮ್ಮಿ ಮಾಡಿ ಜನರ ಜೀವನವನ್ನೂ ಉದ್ದರ ಮಾಡುವ ಬಗೆ ನೋಡಿ ಅಂತ ಹಾಳಾದ ಊರಿನ ಗೌದರು ಹೇಳಿದರೆ ಅದನ್ನ ತಿದ್ದಿ ಕೊಳ್ಳುವ ಬಗೆ ನೋಡದೆ 1ನೇ ತರಗತಿ ಮಕ್ಕಳೂ ಕೂಡ ಮಾಡಲು ನಾಚುವ ಇಂಥಾ ಹಸಿ ಸೂಳೇ ನಾಟಕವನ್ನ ನಮ್ಮ ಗೌರವಾನ್ವಿತ{ಯಾವ ಕಡೆಯಿಂದ ಕೇಳಬೇಡಿ] ಯಡ್ಡಿ ಆಡಲು ಹೊರಟಿರುವ ಈ ಹೀನಾ ಕೃತ್ಯಕ್ಕೆ ಏನು ಮಾಡುವುದು?

ದೇಶದ ಯಾವುದೋ ಮೂಲೆಯಲ್ಲಿ ಸಂಭವಿಸಿದ ರೈಲು ಅಪಘಾತಕ್ಕೆ ಹೊಣೆ ಹೊತ್ತು ಬೇಡ ಬೇಡ ಎಂದು ನೆಹರು ಮತ್ತು ಸಂಪುಟದವರು ಗೋಗರೆದರೂ ರಾಜೀನಾಮೆ ಬಿಸಾಕಿ ಮಂತ್ರಿ ಮಂಡಲದಿಂದ ಹೊರ ಬಂದ ನಮ್ಮ ಧೀಮಂತ ಶಾಸ್ತ್ರೀಜಿಯವರೆಲ್ಲಿ? ಆಧಾರ ಸಹಿತ ತೋರಿಸಿದರೂ ಜಾಣಪೆದ್ದುತನ ತೋರಿಸುವ ಮೂರೂ ಬಿಟ್ಟ ಈ ಹೊಲಸು ಭಟ್ಟಂಗಿಗಳೆಲ್ಲಿ?

ನೀನು ತಿಂದೆ ಅಂತ ಕುಮಾರಸ್ವಾಮಿ, ಅಯ್ಯೋ ನಾನೂ ನೋಡಿದೆ ಯಡ್ಡಿ ತಿಂತಿದ್ದ ಅಂತ ಆಧಾರ ಸಹಿತ ಬಂಗಾರಪ್ಪ, ಅಯ್ಯೋ ನಾನೂ ಕಂಡಿದ್ದೀನಿ ನೀವು ತಿಂತಾ ಇದ್ರಿ ನಿಮ್ಮ ಸಂಬಂಧಿಕರ ಜೊತೆ. ಈಗ ನೀವು ಬಾಯಿ ಮುಚ್ಚಿ... ನಾನು ಮುಚ್ಚುತ್ತೀನಿ.. ಆಮೇಲೆ ಎಲ್ಲರೂ ಒಟ್ಟಿಗೆ ಹೊಲಸು ತಿನ್ನೋಣ ಅಂತ ನಮ್ಮ ಯಡ್ಡಿ...

ಎಲ್ಲ ಹೊಲಸು ಗುಂಡಿಯ ಹಂದಿಗಳೆ....

ಮತದಾರ.. ಇನ್ನಾದರೂ ನೀ ಎಚ್ಚರವಾಗದಿದ್ದರೆ ಇದೆ ನಿನ್ನ ಸಂಹಾರ :-)

ಅದು ಆಗದೆಂಬ ನಿರೀಕ್ಷೆಯಲ್ಲಿ
ಆವೀನ್

Monday, October 4, 2010

ನ್ಯಾಯದ ಬಾಗಿಲಲ್ಲಿ ಹಿಂದೂಸ್ಥಾನದ ಹಿಂದೂಗಳು .. "ಸತ್ಯಮೇವ ಜಯತೇ”


ಕೊಂಚ ಹೆಚ್ಚೇ ನಿರಾಳನಾಗಿದ್ದೀನಿ ಅನ್ನಿಸ್ತಾ ಇದೆ. ಹಿಂದಿನ ದಿನದ ರೋಹಿತನೊಡನೆ ಎತ್ತು ಏರಿಗೆಳೆದರೆ ಕೋಣ ನೀರಿಗೆಳೆವಂಥಾ ಜಂಜಾಟ, ಇಂದು ಬೆಳಿಗ್ಗೆಯಿಂದ ತಲ್ಲಣ, ಚಡಪಡಿಕೆ, ನ್ಯಾಯಾಲದಲ್ಲಿನ ಶ್ರುತಿ ಬದಲಿಸಬಹುದೆಂಬ ಆತಂಕ [ಸ್ವಾತಂತ್ರ್ಯ ಭಾರತ..ಏನು ಬೇಕಾದರೂ ಆಗಬಹುದು] ಎಲ್ಲದಕ್ಕೂ ಒಂದು ಅಂತ್ಯ ಹಾಡಿದ್ದು ಅಲಹಾಬಾದ್ ಹೈಕೋರ್ಟಿನ ಆದೇಶದಲ್ಲಿನ ಸತ್ಯದ ಪ್ರತಿಫಲನ..ಕೊಡಮಾಡಿದ ಸತ್ಯದಲ್ಲೂ ಎಲ್ಲರಿಗೂ ಸಮಪಾಲು [ವಾಸ್ತವವಾಗಿ ವಿಷಮವಾದರೂ]. ನನಗಿಂತ ಹೆಚ್ಚಾಗಿ ದೇಶದ ಜನತೆಯೂ ಅಷ್ಟೇ ನಿರಾಳರಾಗಿರಬೇಕೆನೋ? ಅಂದಂತೆ ಅಂದವರೆಲ್ಲಾರೂ [ನೀವು-ನಾವು ಟೀ ವಿಯಲ್ಲಿ ನೋಡಿದ ಎಲ್ಲಾ ವ್ಯಕ್ತಿತ್ವದ ವ್ಯಕ್ತಿಗಳು, ಅವರ ಬಿನ್ನಹ, ಕೋರಿಕೆ ಬ್ಲ..ಬ್ಲಾ] ನಡೆದಿದ್ದೇ ಆದರೆ ಇಂದಿನ ದಿನ ಭಾರತದ ಹೀನಾಸುಳಿಯ ಇತಿಹಾಸಕ್ಕೊಂದು ಸುವರ್ಣ ಮೈಲಿಗಲ್ಲು.

ಇದ್ದ ಅಸ್ತಿತ್ವ ಇತ್ತು ಎಂದು ಒಪ್ಪಲು ನಮಗೆ ಹಿಡಿದಿದ್ದು ಬರೋಬ್ಬರಿ 60 ವರ್ಷ. ಇದ್ದ ನಮ್ಮಲ್ಲಿನ ಭಂಡತನ ಇರದಿದ್ದ ಹತ್ತು ಹಲವು ಜಂಜಾಟಗಳನ್ನು ಮೈಮೇಲೆಳೆದು ಬಡಿದಾಡುವಂತೆ ಮಾಡಿದ್ದು ಇನ್ನಾದರೂ ಇತಿಹಾಸವಾಗಲಿ. ಅಂಗೈ ಗೆರೆಯಷ್ಟೇ ಪಾರದರ್ಶಕವಾಗಿದ್ದ ಸತ್ಯಕ್ಕೆ ರಾಜಕಾರಣಿಗಳ, ಮತಾಂಧರ ರಂಗಪ್ರವೇಶ ಆಲೋಚನೆಯ ದಿಕ್ಕನ್ನೇ ಬದಲಿಸಿದ್ದು ಸುಳ್ಳಲ್ಲ.

ದಿಟವಾಗಿ ಆದದ್ದಾದರೂ ಏನು? ಮಹಾಭಾರತದ ಪರ್ವದಲ್ಲೂ ರಾಮಾಯಣದ ಅಂಜನೆಯನ ಪ್ರಸ್ತಾಪದಲ್ಲೇ ರಾಮ ದ್ವಾಪರ ಯುಗದಲ್ಲೇ ಇತಿಹಾಸ ಪುರುಷನಾಗಿದ್ದುದು ಸತ್ಯವಾಗುತ್ತದೆ. ಅಂಥಾ ದ್ವಾಪರಕ್ಕೆ ಸಮಯದ ಘಂಟೆ ಕಟ್ಟಿದ ಇತಿಹಾಸಕಾರರಿಂದ ವೈಜ್ಞಾನಿಕವಾಗಿ ಕೃಷ್ಣನ ಕಾಲಮಾನ ಕ್ರಿ.ಪೂ.1500-2500 ವರ್ಷಗಳಿರಬಹುದೆಂಬ ಅಂದಾಜು [ವೇದಗಳ ಕಾಲಮಾನ ಅಂದಿನ ಪ್ರಮುಖ ನದಿ [ಕ್ರಿ.ಪೂ 4000-5000 ಅವಧಿಯಲ್ಲಿ] ಸರಸ್ವತಿ ರಾಜಸ್ತಾನದ ಮರಳಲ್ಲಿ ಮಾಯವಾಗುವವರಗೆ..]. ಅರ್ಥ 3500 ವರ್ಷಗಳಿಂದಲೂ ಜನಮಾನಸ, ಕಾವ್ಯ-ಕಬ್ಬಗಳಲ್ಲಿ ಅಯೋಧ್ಯೆ ರಾಮನ ಆವಾಸಸ್ಥಾನ. ಭಾರತೀಯರ ಆರು ಪವಿತ್ರ ನಗರಿಗಳಲ್ಲಿ ಅಯೋಧ್ಯೆಯೂ ಒಂದು. ಅಂತಿಪ್ಪ ರಾಮ ಭಾರತದ ಭಕ್ತಿಪಂಥಕ್ಕೆ ನೀಡಿದ ಸ್ಪೂರ್ತಿ ಅಪಾರ.. ಗಾಂಧಾರದಿಂದ ಮಲಬಾರವರೆಗೂ, ಕಾಮರೂಪದಿಂದ ಸೌರಾಷ್ಟ್ರದವರೆಗೂ ಪ್ರಾಚೀನ ಭಾರತದ ಸಾರ್ಥವಾಹಕರು ತಮ್ಮೊಡನೋಯ್ಯುತ್ತಿದ್ದ ಜನ, ಸಂಸ್ಕೃತಿಗಳಿಂದ ಹೊರ ದೇಶಗಳಾದ ಸಿಲೋನ್,ಇಂಡೋನೇಷಿಯಾ,ಜಪಾನ್, ತೈವಾನ್, ಚೀನಾ, ಸಿಂಗಾಪುರನಲ್ಲಿ ಹರಡಿರುವ ದೇಸೀ ಸೊಗಡಿನ ಭಾರತದ ರಾಮಾಯಣಕ್ಕೂ ಮರ್ಯಾದ ಪುರುಷ ರಾಮನೆ ಕಥಾನಾಯಕ... ಸಾವಿರ ವರುಷಗಳಿಂದಾಲೂ ಪ್ರಕೃತಿಯ ಹತ್ತು ಹಲವು ಮಜಲಿನಲ್ಲೇ ತಮ್ಮ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾದ ದೈವೀಕತೆಯನ್ನು ಕಂಡುಕೊಂಡಿರುವ ಭಾರತೀಯ ಸಾಂಸ್ಕೃತಿಕ ರಂಗಕ್ಕೆ ಅದು ಊಹಿಸಲೂ ಆಗದಂತಹ ಸಿದ್ದಾಂತಗಳೊಡನೆ ಪೈಶಾಚಿಕ ಪ್ರವೇಶ ಮಾಡಿದ್ದು ಇಸ್ಲಾಂ. ಆರಂಭದ ಐಶ್ವರ್ಯ ದೋಚುವಿಕೆ ಒಂದು ಹಂತಕ್ಕೆ ಬಂದಾಗ ಮರೆತಿದ್ದ ಧರ್ಮವನ್ನು ನೆನಪಿಸಿಕೊಂಡ ಇಸ್ಲಾಂ ದೊರೆಗಳು ತಮ್ಮ ಧರ್ಮದ ತೆವಲನ್ನು ಭಾರತದಲ್ಲಿನ ಮೂಲನಿವಾಸಿಗಳ ಮೇಲೆ ಹೇರಲು ಶುರುಮಾಡಿದರು.ನಂತರದ್ದೇ ಒಂದು ಕರಾಳ ಇತಿಹಾಸ...

ಆರಂಭದಲ್ಲಿ ಮೂಲ ಜನರನ್ನು ಧರ್ಮಾಂತರಿಸಿದ ಇಸ್ಲಾಂ ದೊರೆಗಳು ನಂತರದಲ್ಲಿ ಭಾರತದ ಪಟ್ಟಣಗಳ ಮೂಲ ಹೆಸರುಗಳನ್ನೂ ಅಪಭ್ರಂಶ ಮಾಡತೊಡಗಿದರು..ಪ್ರಾಯಾಗವನ್ನು ಅಲ್ಲಾಹಬಾದ್, ಆಗ್ರಾವನ್ನು ಅಕ್ಬರಾಬಾದ್, ಮಥುರಾವನ್ನು ಇಸ್ಲಾಮಾಬಾದ್,ಕಾಶಿ ಮೊಹಮದಾಬಾದ್,ಬೀದರ್ ಜಫಾರಾಬಾದ್,ಕೋಲ್ ಪಟ್ಟಣವನ್ನು ಅಲಿಘಡ್ ಹೀಗೆಹತ್ತು ಹಲವು ಮಾರ್ಪಾಡಿನ ನಂತರದಲ್ಲೇ ಹುಟ್ಟಿದ್ದು ಹಿಂದೂ ಧರ್ಮೇಯರ ಧಾರ್ಮಿಕ ನಂಬಿಕೆಗಳಿಗೆ ಘಾಸಿ ಮಾಡುವ ಹೊಲಸು ಮನಸ್ಥಿತಿ. ಅದರ ಪರಿಣಾಮವೇ ಮಂದಿರಗಳನ್ನು ನಿರ್ಮೂಲನೆ ಮಾಡುವ, ಅಲ್ಲಿನ ಅಮೂಲ್ಯ ಶಿಲ್ಪಕೃತಿಗಳನ್ನ ನಿರ್ನಾಮಮಾಡಿ ಮಂದಿರದ ಜಾಗದಲ್ಲೇ ಅದೇ ಕಲ್ಲು, ಕಂಬ, ತೊಲೆ, ಬೋಧಿಗೆಗಳಿಂದ ಮಸೀದಿಗಳನ್ನು ಕಟ್ಟಿಸುವ ಹುಚ್ಚು ಚಟಕ್ಕೆ ಬಿದ್ದ ಇಸ್ಲಾಂ ದೊರೆಗಳು ಮಾಡದ ಪಾಪದ ಕೆಲಸವಿಲ್ಲ.ಘಜನಿ ದೊರೆಗಳಿಂದ ಗುಲಾಮೀ ದೊರೆಗಳವರೆಗೂ, ಬಾಬರನಿಂದ ಔರಂಗಾಜೇಬನವರಗೂ ಈ ಪದ್ದತಿ ಅನೂಚಾಗಿ ನಡೆದು ಬಂತು. 11ನೇ ಶತಮಾನದ ಆದಿಯಲ್ಲಿ ಸೋಮನಾಥ ದೇವಾಲಯವನ್ನು ಒಡೆದ ಘಜ್ನಿ ಈ ಪರಂಪರೆಗೆ ಶಂಕುಸ್ಥಾಪನೆ ಮಾಡಿದ,ಕುತುಬುದಿನನು ಮಿಹಿರ ಹವೇಲಿ[ಮೇಹ್ರೊಲಿ]ಯಲ್ಲಿ ಕಟ್ಟಿದ ಕುತುಬ್ ಮಿನಾರ್, ಅಜೇಯಮೇರು[ಅಜ್ಮೀರ್]ನ ಶಿವ ಮಂದಿರವನ್ನು ಒಡೆದು ಕಟ್ಟಿದ ವಿಶಾಲ ಮಸೀದಿ, 1528ರಲ್ಲಿ ಹಿಂದೂ ದೇಗುಲವನ್ನು ಒಡೆದು ಕಟ್ಟಿದ ಬಾಬರನ ಮಸೀದಿ, ಮೂಲ ವಿಶ್ವನಾಥ ಮಂದಿರವನ್ನು ಒಡೆಸಿ ಅದೇ ಜಾಗದಲ್ಲಿ 1669ರಲ್ಲಿ ಔರಂಗಾಜೇಬನು ಕಟ್ಟಿಸಿದ ಕಾಶಿಯ ಗ್ಯಾನವಾಪಿ ಮಸೀದಿ, 1670ರಲ್ಲಿ ಮಥುರ ಕೇಶವರಾಯನ ದೇವಸ್ಥಾನದ ಆಸ್ತಿಗಳಿಂದ ಕಟ್ಟಿಸಿದ ಮಸೀದಿ [ಮೂಲ: ಔರಂಗಜೆಬನ ಆಸ್ಥಾನದ ಮಾಸಿರ್-ಇ-ಆಲಂಗಿರಿ ಪುಸ್ತಕ] ಅಂತೆಯೇ ಬುಖಾರ, ಸಮಾರಾಖಂಡ, ಖೋಟನ್, ಪುರುಷಪುರ್, ಶ್ರೀನಗರ, ಒಡಂತಾಪುರಿ,ಅಮರಾವತಿ, ಕಾಂಚಿ, ದ್ವಾರಸಮುದ್ರ, ಅಜೇಯಮೇರು[ಅಜ್ಮೀರ್], ಗ್ವಾಲಿಯರ್,ದೇವಾಗಿರಿ, ಚಂಪ, ವಾರಣಾಸಿ,ಸರನಾಥ್, ನಾಲಂದ , ವೈಶಾಲಿ, ವಿಕ್ರಮಶೀಲ, ಶರಾವಸ್ತಿ, ಕನೌಜ್ ಹೀಗೆ ಹತ್ತು ಹಲವು ದೇವ ಮಂದಿರಗಳನ್ನು,ಜ್ಞಾನದ ಆಗರಗಳನ್ನು ನಾಶಪಡಿಸಿ ತಮ್ಮ ಕುರುಹುಗಳನ್ನು ಮೆಟ್ಟಿದ್ದು ಇದೇ ನಮ್ಮ ಪರ ಧರ್ಮ ಸಹಿಷ್ಣು ಇಸ್ಲಾಂ ದೊರೆಗಳು. [ಓದಿ: ಸೀತಾರಾಂ ಗೋಯಲ್ಲರ “HINDU TEMPLES: WHAT HAPPENED TO THEM?”

ಇರಲಿ... ತನ್ನ ಹಿರೀಕರು ಮಾಡಿದ ಘನಕಾರ್ಯವನ್ನೂ ಬಾಬರನು ಮಾಡಿದ್ದು. ಮಂದಿರವನ್ನು ಛಿನ್ನ-ಭಿನ್ನ ಮಾಡಿ ಮಸೀದಿಯನ್ನು ಕಟ್ಟಿದ ಬಾಬರ್ ನಂತರದಲ್ಲಿ ಕಾಲನ ಹೊಡೆತಕ್ಕೆ ಸಿಕ್ಕಿ ಚಿರ ನಿದ್ರೆಗೆ ಜಾರಿದ... ಇಸ್ಲಾಂ ದೊರೆಗಳ ಆಡಳಿತದಲ್ಲಿ ತಮ್ಮ ಪುಂಸತ್ವವನ್ನೇ ಕಳೆದುಕೊಂಡಿದ್ದ ಹಿಂದುಗಳು ಆ ಕುರಿತು ಆಳುವ ದೊರೆಗೆ ಏನಾದರೂ ಕೇಳುವ ಹಕ್ಕನ್ನೇ ಕಳೆದುಕೊಂಡು ನಾಯಿಗಿಂತ ಕಡೆಯಾದ ಎರಡನೇ ದರ್ಜೆ ಜೀವನ ನಡೆಸುತ್ತಿದ್ದರು. ನಂತರದ ಅಕ್ಬರ್, ಶಹಜಹಾನ್, ಔರಂಗಜೇಬ್ ಎಲ್ಲರೂ ಮಂದಿರ ಒಡೆದು ಮಸೀದಿ ಕಟ್ಟಿ ತಮ್ಮ ಇಸ್ಲಾಂ ಪುಣ್ಯದ ಬಿಂದಿಗೆಯನ್ನು ತುಂಬಿಸಿ ಕೊಂಡವರೇ.
ನಂತರದ ಬೆಳವಣಿಗೆಗಳು ಎಲ್ಲರಿಗೂ ತಿಳಿದಿರುವಂಥದ್ದೇ. ತಕ್ಕಡಿ ಹಿಡಿದು ವ್ಯಾಪಾರಕ್ಕೆಬಂದು ದೇಶದ ಭವಿಷ್ಯವನ್ನೇ ತಕ್ಕಡಿಯಲ್ಲಿ ತೂಗಿ ತಮ್ಮ ದಾಹ ನೀಗಿಸಿಕೊಳ್ಳುತ್ತಿದ್ದ ಬ್ರಿಟಿಷರ ಒಡೆದು ಆಳುವ ನೀತಿ,ದೇಶ ವಿಭಜನೆ, ಬಹಳ ಬೇಜವಾಬ್ದಾರಿತನದಿಂದ ತಡವಾಗಿ ನಮ್ಮ ದೇಶದ ಗಾಡಿಯನ್ನು ಎಳೆಯುವ ಹಂತದಲ್ಲೇ ಸಮಸ್ಯೆಗಳ ಸರಮಾಲೆ, 1960ರ ದಶಕದ ಆರೋಪ-ಪ್ರತ್ಯಾರೋಪ, 90ರ ದಶಕದ ಮಸೀದಿ ದ್ವಂಸ, ಕೋಮುಗಲಭೆ, ಈ ದಶಕದ ಗೋಧ್ರಾ ಹತ್ಯಾಕಾಂಡ, ನಂತರದ ಮಾರಣಹೋಮ.. ಎಲ್ಲದಕ್ಕೋ ಮೂಲ ಕಾರಣ ತಮ್ಮ ಇಸ್ಲಾಂ ಪುಣ್ಯದ ಬಿಂದಿಗೆಯನ್ನು ತುಂಬಿಸಿಕೊಂಡ ನಮ್ಮ ಇತಿಹಾಸದ ಆದರ್ಶ ಪುರುಷರೇ.

ಮುಖ್ಯವಾಗಿ ನಾನು ಹುಟ್ಟಿದಾಗಿನಿಂದ ಕೇಳಿ ಬರುತ್ತಿರುವ ಪ್ರಶ್ನೆ ಎಂದರೆ “ದೇವರು ನಮ್ಮಲ್ಲಿರಬೇಕು.. ನಾವು ಕಲ್ಲು ಮಣ್ಣುಗಳಿಂದ ಕಟ್ಟುವ ದೇವರಿಂದ ನಮ್ಮ ನೆಮ್ಮದಿ ಹಾಳಾಗುವಂತದ್ದಾದರೆ ಅಂಥಾ ದೇವಸ್ಥಾನ ನಮಗ್ಯಾಕೆ ಅಂತ?” ಒಪ್ಪುವ ಮಾತೇ.. ರಾಮನೂ ಮಂದಿರ ಕೇಳಲಿಲ್ಲ, ಅಲ್ಲಾಹ ಕೂಡ ಮಸೀದಿ ಬೇಡಲಿಲ್ಲ.. ಬೇಕಿರುವುದು ಅವನನ್ನು ಹುಡುಕುವ ನಮಗೆ. ವಿಗ್ರಹಾರಾಧನೆಯ ಬಗ್ಗೆ ವಿವೇಕಾನಂದರು ಸಾಮಾನ್ಯನಿಗೂ ತಿಳಿಯುವ ಹಾಗೆ ವಿವರಿಸಿದ್ದಾರೆ. ಭಗವಂತನನ್ನು ಯಾವ ವಿಗ್ರಹದಿಂದಲೂ, ಆಕಾರದಿಂದಲೂ ಮಿತಗೊಳಿಸುವುದು ಸಾಧ್ಯವಿಲ್ಲ.ಅವನು ಅನಂತ, ನಿರಾಕಾರ, ನಿರ್ಗುಣ;ರೂಪ, ಕಾಲ,ದೇಶಗಳಿಗೆ ಆತ ಅತೀತ.ಆದರೆ ಜ್ಞಾನ ಮಾರ್ಗದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಚಿಂತಿಸುವವನು ಮಾತ್ರ ಆ ಮಾತನ್ನ ಹೇಳಬೇಕು.ಆಧ್ಯಾತ್ಮಿಕ ಜೀವನದ ಆರಂಭದಲ್ಲೇ ಇಂಥ ಗಹನವಾದ, ಅಮೋಘವಾದ ಕಲ್ಪನೆಯು ಯಾರಿಗೂ ಬರುವುದಿಲ್ಲ. ಭಗವಂತನನ್ನು ನಿರಾಕಾರ, ನಿರ್ಗುಣ ಎನ್ನುವುದು ಬಹಳ ಸುಲಭ. ಆದರೆ ಹಾಗೆ ಭಾವಿಸಿ ಆರಾಧಿಸುವುದು ಸಾಮಾನ್ಯನಿಗೆ ಮೀರಿದ ವಿಷಯ. ಸಾಮಾನ್ಯ ಮನುಷ್ಯನ ಚಿತ್ತವನ್ನು ಕೇಂದ್ರೀಕರಿಸಲು ವಿಗ್ರಹವು ಒಂದು ಮಹತ್ತರ ಸಾಧನ.ಸಾಧಕನ ಊರ್ಧ್ವಮುಖಮಾರ್ಗದಲ್ಲಿ ಇರುವ ಸಹಾಯಕ ಏಣಿ ವಿಗ್ರಹ.ಹಾಗೆ ನೋಡಿದರೆ ನಿರಾಕಾರದ ತತ್ವವನ್ನು ಪರಮಾವಧಿಗೆ ಹಿಂದೂಗಳಷ್ಟು ಒಯ್ದವರೇ ಇಲ್ಲ. ಹಾಗಿದ್ದೂ ನಾವು ಸಕಾರಕ್ಕೆ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಹಿಂದೂ ಧರ್ಮದ ವೈಶಾಲ್ಯ ಇರುವುದೇ ಅಲ್ಲಿ. ಆಧ್ಯಾತ್ಮದ ಹಾದಿಯಲ್ಲಿ ಒಂದು ಮಟ್ಟದವರಗೆ ಸಾಗಿರುವವನ ಅಭಿಪ್ರಾಯವನ್ನೇ ಉಳಿದ ಎಲ್ಲರ ಮೇಲೂ ಬಲವಂತವಾಗಿ ಹೇರುವುದು ಧಾರ್ಮಿಕ ಅಸಹಿಷ್ಣುತೆಯಾಗುತ್ತದೆ. ನಿರಾಕಾರ ತತ್ವವನ್ನೇ ಎತ್ತಿ ಹಿಡಿದ ಶಂಕರಾಚಾರ್ಯರು ಶಾರದಾದೇವಿಯ ವಿಗ್ರಹವನ್ನು ಯಾಕೆ ಸ್ಥಾಪಿಸಿದರು? ಸಾಮಾನ್ಯ ಜನರಾದ ನಮಗಾಗಿ. ನಾವುಗಳೂ ಶಂಕರಾಚಾರ್ಯರಂತಾದ ಮೇಲೆ ನಮಗೆ ಆ ವಿಗ್ರಹ ಬೇಕಿಲ್ಲ. ಅಷ್ಟೇ ಇದರ ಮೂಲ ತತ್ವ. ಅಲ್ಲಾಹ್ ನಿಗೆ ರೂಪ ಇಡದ ಮುಸಲ್ಮಾನರೂ ತಮ್ಮ ಚಿತ್ತ ಕೇಂದ್ರೀಕರಿಸಲು ಬಳಸುವುದು ಕಾಬಾದ ಚಚ್ಚೌಕ ಮಂದಿರವನ್ನೇ, ಇಸ್ಲಾಂ ನಿಷೇದಿಸಿದ ಸಮಾಧಿಪೂಜೆ, ಹರಕೆ, ಸೇವೆ ಎಲ್ಲಾ ಇಸ್ಲಾಮಿಯರು ಬಳಸುವ ಏಕಾಗ್ರತೆಯ ಸಾಧನೆಗಳೆ.(!!!). ವಿಗ್ರಹಾರಾಧನೆಯನ್ನು ಒಪ್ಪದ ಕ್ರಿಶ್ಚಿಯನ್ನರೂ ಹಲವು ಬಗೆಯಲ್ಲಿ ವಿಗ್ರಹಾರಾಧಕರಾಗಿದ್ದಾರೆ.ಮೈಕಲ್ ಎಂಜಲೋ ಮೊದಲಾದವರು ಕ್ರೈಸ್ತ ಮತದ ಕತೆ ಪೌರಾಣಗಳನ್ನು ತಮ್ಮ ಕುಂಚದಲ್ಲಿ ಚಿತ್ರಿಸಿದ್ದಾರೆ. ಶಿಲುಬೆಗೇರಿದ ಕ್ರಿಸ್ತನ ಪಟವೆ ಎಲ್ಲೆಲ್ಲೂ ಇದೆ. “ಪರಲೋಕದಲ್ಲಿರುವ ನಮ್ಮ ತಂದೆಯೇ...” ಅಂತ ಅವರು ಪ್ರಾರ್ಥನೆ ಮಾಡುವಾಗ ಅವರ ಮನಸ್ಸಿನಲ್ಲಿ ಯಾವುದಾದರೂ ಒಂದು ಆಕಾರ ಮೂದೇ ಮೂಡುತ್ತದೆ.ಚಿತ್ರಕ್ಕೆ ನಮ್ಮಂತೆ ಹೂವು ಗಂಧಗಳಿಂದ ಪೂಜೆ ಮಾಡದೆ ಇರಬಹುದು. ಆದರೆ ಅವರು ಮೇಣದ ಬತ್ತಿ ಹೊತ್ತಿಸಿ ಪ್ರಾರ್ಥಿಸುವುದೂ ಸಗುಣ ಸ್ವರೂಪವಾದ ಚಿತ್ರಕ್ಕೇ. ಅದಕ್ಕೆ ಹೇಳುವುದು... ವಿಗ್ರಹಾರಾಧನೆ ಪ್ರವೃತ್ತಿಯನ್ನು ಸಂಪೂರ್ಣವಾಗಿ ನಾಶಗೊಳಿಸಲು ಯಾರಿಗೂ ಸಾಧ್ಯವಿಲ್ಲ. ಅದಕ್ಕೇ ತಕ್ಕ ಸ್ಥಾನ ಕೊಟ್ಟು ಅದನ್ನೇ ಮುಕ್ತಿಮಾರ್ಗದಲ್ಲಿ ಭಾವರೂಪಕವಾಗಿ ನಾವುಗಳು ಏಕೆ ಉಪಯೋಗಿಸಬಾರದು?

ಮಂದಿರ, ಪ್ರಾರ್ಥನಾ ಸ್ತಳಗಳನ್ನು ದ್ವಂಸಮಾಡುವುದನ್ನು ಜೈನರು, ಬೌದ್ಧರೂ, ಶೈವರು, ವೈಷ್ಣವರು,ಕ್ರಿಸ್ತರು ಸೇರಿದಂತೆ ಯಾರ್ಯಾರ ಧರ್ಮಗ್ರಂಥಗಳೂ ಒಪ್ಪುವುದಿಲ್ಲ.. ಒಡೆಯುವಂತೆ ಹೇಳಿಲ್ಲ. ಅಪರೂಪಕ್ಕೆ ಯಾವನಾದರೂ ಪುಂಡ ಆ ಕೆಲಸ ಮಾಡಿದರೆ ಅವನನ್ನು ತಮ್ಮ ಪಂಥದ ಮಾದರಿ ಅಂತ ಪರಿಗಣಿಸುವುದೂ ಇಲ್ಲ. ಆದರೆ ಪರಧರ್ಮೀಯರ ಪೂಜಾಸ್ಥಳಗಳನ್ನು ಒಡೆಯುವುದು, ಕತ್ತಿ ಹಿಡಿದು ಧರ್ಮಾಂತರಿಸುವುದು, ಸೋತವರನ್ನು ಸಾವಿರ ಸಾವಿರಗಟ್ಟಲೆ ಗುಲಾಮರಾಗಿ ಒಯ್ಯುವುದು ಇವೆಲ್ಲಾ ಇಸ್ಲಾಂ ಧರ್ಮಸ್ಥಾಪಕರೆ ಮಾಡಿ ಮಾದರಿ ಹಾಕಿಕೊಟ್ಟಿರುವ ಮೂಲ ನಂಬಿಕೆಗಳು. ಹಿಂದೂ ಧರ್ಮದಲ್ಲೂ ಇಂಥ ಹತ್ತು ಹಲವು ಒಪ್ಪಲಾಗದ ನಂಬಿಕೆಗಳಿವೆ.. ನಮ್ಮ ಹಿಂದಿನವರ ಹಲವು ತಪ್ಪುಗಳನ್ನು ನಾವು ಒಪ್ಪಿ ಹೊಣೆಗಾರಿಕೆಯಿಂದ ಮನು ಮೊದಲಾದ ಧರ್ಮಶಾಸ್ತ್ರಕಾರಾರ ಶ್ರೇಣಿಕರಣದ ಅಂಶಗಳನ್ನು ತಿರಸ್ಕರಿಸಿ ಸರ್ವರೂ ಸಮಾನರೆಂಬ ತತ್ವದ ಆಧಾರದ ಮೇಲೆ ನಾವು ನಮ್ಮ ಸಂವಿಧಾನ ರಚನೆ ಮಾಡಿಕೊಂಡಿದ್ದೇವೆ.. ದಳಿತರಿಗೆ ಹಿಂದುಳಿದವರಿಗೆ ರಕ್ಷಣೆ ಒದಗಿಸಿ , ಅವರನ್ನು ಆಗೌರವದಿಂದ ಕಾಣುವವರನ್ನು ಶಿಕ್ಷಿಸಿ, ಕೆಲವು ದೇವಸ್ಥಾನಗಳಲ್ಲಿ ಅವರನ್ನೇ ಪೂಜಾರಿಗಳನ್ನಾಗಿಸಿ ಮನುವು ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ. ಅಂತಹ ಒಂದು ಹೊಣೆಗಾರಿಕೆ ಮುಸ್ಲಿಮರಲ್ಲೂ ಕಂಡುಬಂದ ಕ್ಷಣವೇ ದೇಶದ 50% ಸಮಸ್ಯೆಗಳು ಪರಿಹಾರವಾಗುತ್ತದೆ. ಆದರೆ ಅಂತಹ ಒಂದು ತಿದ್ದಿಕೊಳ್ಳುವ ಅವಕಾಶವನ್ನು ನಾವು ಮುಸ್ಲಿಂ ಸಮುದಾಯಕ್ಕೂ ಕೊಡಮಾಡಬೇಕು.ತಿದ್ದಿಕೊಳ್ಳುವ ಮೊದಲು ತಪ್ಪಿನ ಅರಿವಾಗಬೇಕು. ಹಿಂದಿನ ಇಸ್ಲಾಂ ರಾಜರು, ಮುಸಲ್ಮಾನರು ಮಾಡಿದ ತಪ್ಪುಗಳನ್ನು ಪ್ರಾಂಜಲವಾಗಿ ಅರಿತು ಒಪ್ಪಿಕೊಳ್ಳುವ ಹೊಣೆಗಾರಿಕೆ ಇಂದಿನ ಮುಸಲ್ಮಾನರಿಗೆ ಬರಬೇಕು. ಹೊಣೆಗಾರಿಕೆ ಬೇಡವೆಂದರೆ ತಮ್ಮ ಹಿರಿಯರ ತಪ್ಪುಗಳನ್ನು ತಾವು ಸಮರ್ಥಿಸುತ್ತೀವಿ ಅಂತಲೇ ಅರ್ಥ. ತಪ್ಪುಗಳನ್ನು ಅರಿಯದೆ ಆ ತಪ್ಪುಗಳನ್ನು ತಿದ್ದಿಕೊಳ್ಳುವುದೆಂತು? ತಪ್ಪುಗಳನ್ನು ಪ್ರಾಮಾಣಿಕವಾಗಿ ಒಪ್ಪಿದ್ದೇ ಆದಲ್ಲಿ ನಾವು ಯಾವುದನ್ನ ಮಾಡಬಾರದು, ಮಾಡುವುದಿಲ್ಲ ಎನ್ನುವ ಹೊಣೆಗಾರಿಕೆ ತಂತಾನೇ ಬರುತ್ತದೆ. . ಹಿಂದಿದ್ದ ಜನ-ಮನ ಮಾಡಿದ ತಪ್ಪು-ಒಪ್ಪುಗಳಿಗೆ ಇಂದಿನವರು ಹೊರುವ ಹೊಣೆಗಾರಿಕೆಯಲ್ಲೇ ನಮ್ಮ ಮುಂದಿನವರ ಭವಿಷ್ಯವಿದೆ. ನಮ್ಮ ಪೂರ್ವಿಕರ ಯಾವ ಕೃತ್ಯಗಳನ್ನು ಪುರಸ್ಕರಿಸಬೇಕು, ತಿರಸ್ಕರಿಸಬೇಕು ಅನ್ನುವ ಸಾಮಾನ್ಯ ಪ್ರಜ್ಞೆಯೂ ನಮ್ಮಲ್ಲಿಲ್ಲದಿದ್ದರೆ ನಮ್ಮ ಮುಂದಿನ ತಲೆಮಾರಿನ ಸಂತಸವನ್ನು ನಾವೇ ಕೈಯ್ಯರೆ ಹಾಳುಮಾಡಿದಂತೆ. ಯಾಕೆಂದರೆ ನಮ್ಮ ಹಿರಿಯರು ಮಾಡಿದ್ದು ಅದನ್ನೇ ತಾನೇ :-)

ಪರ ಪೂಜಾ ಸ್ತಳಗಳನ್ನು ಒಡೆದ ಇತಿಹಾಸದ ಕ್ಷಣಗಳನ್ನು ತಿರಸ್ಕರಿಸುವುದು, ಧರ್ಮಕ್ಕಿಂತ ದೇಶ ದೊಡ್ಡದು, ನಿಷ್ಠೆ ದೇಶಕ್ಕೇ ಹೊರತು ಧರ್ಮಕ್ಕಲ್ಲ , ಪ್ರತಿಯೊಬ್ಬರ ಧಾರ್ಮಿಕ ಮನೋಭಾವನೆಗಳನ್ನ ಗೌರವಿಸುವುದು, ಇರುವ ನಾಡಲ್ಲಿ ಅಲ್ಲಿಯವರಂತೆ ಮುಕ್ತ ಮನಸ್ಸಿನಿಂದ ಬೆರೆಯುವುದು,ದೇಶದ ಆಪತ್ಕಾಲದಲ್ಲಿ ನಮ್ಮ ನಿಷ್ಠೆ ಇರಬೇಕಿದ್ದು ನಮ್ಮ ಮಾತೃಭೂಮಿಗೇ. ಧರ್ಮದ ಆಧಾರದಲ್ಲಿ ನನ್ನ ನಿಷ್ಠೆ ಮೆಕ್ಕಾಗೆ, ನನ್ನ ನಿಷ್ಠೆ ಬೆತ್ಲಹೆಂಗೆ, ದೇಶದ ಮನೆ ಹಾಳಾಗಿಹೋಗಲಿ ಅನ್ನುವ ತಾಯ್ಗಂಡತನ ಬೇಡ ಎಂಬಂಥಾ ಸೂಕ್ಷ್ಮ ವಿಷಯಗಳನ್ನು ಎಲ್ಲರಿಗೂ ಹೇಳಿಕೊಡುವ ಅವಶ್ಯಕತೆ ಇಲ್ಲ.. ತಮ್ಮ ಹಿಂದಿನಿಂದ ಬಂದ ಆಚಾರಗಳಲ್ಲಿನ ಮಂಕನ್ನು ಕೊಂಚ ಕೊಡವಿದರೆ ಎಲ್ಲಾ ತಂತಾನೇ ಬರುತ್ತದೆ. ಕೊಡವುವಷ್ಟು ಪ್ರಜ್ಞಾವಂತಿಕೆ, ತಿಳುವಳಿಕೆ ಹಿಂದೂಗಳ ಸಹ ಬಾಂಧವರಿಗೆ ಬೇಕಷ್ಟೆ.

ಒಟ್ಟಿನಲ್ಲಿ ಸರ್ವರಿಗೂ ಸಮಾನವಾದ ತೀರ್ಪು ಬಂದಿದೆ. ಮಂದಿರವಿದ್ದ ಸ್ಥಳ ಮತ್ತೆ ಹಿಂದುಗಳಿಗೆ ಸಿಕ್ಕಿದೆ. ಅಷ್ಟು ಸಂತೋಷ ನಮಗೆ ಸಾಕು. ಮುಸ್ಲಿಮರಿಗೂ ತಮ್ಮದೇ ಆದ ಪಾಲು ಸಿಕ್ಕಿದೆ. ಇನ್ನಾದರೂ ಹೊಣೆಗಾರಿಕೆಯಿಂದ ವರ್ತಿಸುವುದನ್ನು ಕಲಿಯೋಣ. ಭೂತದಲ್ಲಿ ಬದುಕುವ ಹುಚ್ಚು ಸಾಹಸ ಬೇಡ... ವರ್ತಮಾನದ ತೀರ್ಪು ಭೂತಕ್ಕೆ ಬೀಗ ಜಡಿದಿದೆ, ಮುಂದಿನದೇನಿದ್ದರೂ ಭವಿಷ್ಯದ್ದು. ನಮ್ಮ ಜೊತೆ ಜೊತೆಯಲ್ಲೇ ಬದುಕುವ ಮುಸ್ಲಿಂ ಬಾಂಧವರೊಡನೆ ನಮ್ಮ ಸಹಬಾಳ್ವೆ ಸಾಗಲೇಬೇಕಿದೆ. ಮಂದಿರ-ಮಸೀದಿ ಪಕ್ಕದಲ್ಲಿದ್ದರೂ ಅದು ಮುಂದೊಂದು ದಿನ ಇತಿಹಾಸದ ಕ್ಷಣಗಳನ್ನು ಮತ್ತೆ ಸೃಷ್ಟಿಸದೆಂಬ ನಂಬಿಕೆ ನನ್ನದು. ನಮ್ಮ ದೇಶದ ಮೇಲೆ ಬಾಂಬನ್ನಿಕ್ಕುವ ಪಾಕಿಸ್ತಾನವನ್ನೇ ನಾವು ನಂಬಿ ಮಾತುಕತೆಗೆ ಕೂರುತ್ತೇವಂತೆ … ಅಂತಹುದರಲ್ಲಿ ನಮ್ಮಲ್ಲೇ ಒಂದಾಗಿರುವ ನಮ್ಮ ಮುಸ್ಲಿಂ ಬಾಂಧವರನ್ನು ನಂಬದೆ ಇನ್ಯಾರನ್ನು ನಂಬುವುದು?

ರಾಮ ರಾಜ್ಯದ ಭರವಸೆಯಲ್ಲಿ

ನಿಮ್ಮ
ಆವೀನ್

ಓದಿ:
1. ಸೀತಾರಾಂ ಗೋಯಲ್ಲರ “ದ ಹಿಂದೂ ಟೆಂಪಲ್ಸ್: ವಾಟ್ ಹ್ಯಾಪ್ಪಂಡ್ ಟು ದೆಮ್”.

2. ಸೀವೆಲ್ಲನ “ದ ಫರ್ಗಟ್ಟನ್ ಎಂಪರರ್”
3. ಜದುನಾಥ ಸರ್ಕಾರರಿಂದ ಅನುವಾದಿತ “ಮಾಸಿರ್-ಈ-ಆಲಂಗೀರ್”

Saturday, September 11, 2010




"ಇರುವುದೊಂದೇ ಸತ್ಯ, ಅದಕ್ಕೆ ಏನೆಸರಿಡಬೇಕು ಎಂಬುದರಲ್ಲಿ ಮಾತ್ರ ವಿವಾದವಿದೆ."

ಹಿಂದುವೋ, ಮುಸಲ್ಮಾನನೋ ಕ್ರಿಸ್ತನೋ ಒಟ್ಟಿನಲ್ಲಿ ಎಲ್ಲರೊಳಗೊಂದಾಗಿರುವ ಎಲ್ಲರಿಗೂ ಗಣು ಮಾಮನ ಹಬ್ಬದ ಶುಭಾಶಯಗಳು.

Tuesday, August 3, 2010



ಈ ಹೊಲಸು ಜನಗಳಿಗೆ ಯಾಕೆ ಇನ್ನೂ ಬದುಕೋ ಆಯುಷ್ಯ ಕೊಟ್ಟಿದೀಯ ದೇವರೇ? ಅಂತ ದರ್ದೇನೋ ನಿನಗೆ?
ದಿನಕ್ಕೆ ಅರ್ಧ ಪೌಂಡ್ ಬ್ರೆಡ್ಡು, 100 ಗ್ರಾಂ ಸಕ್ಕರೆ ತಿಂದು ಮೈಲಿಗಟ್ಟಲೆ ನೆಡೆದು ಗಾಂಧೀ ಮಾಡಿದ ಸತ್ಯಾಗ್ರಹವೆಲ್ಲಿ ಈ ಶನಿಗಳು ಸರ್ಕಾರಿ ವೆಚ್ಚದಲ್ಲಿ, ಜನರ ರಕ್ತ-ಮಾಂಸಗಳನ್ನು ತಿಂದು ಕೊಬ್ಬಿ ಇನ್ನೂ ಬೇಕೆಂದು ಸೋಗಲಾಡಿ ಸೂಳೆನಾಟಕವಾಡುವ ಈ ಅನಿಷ್ಟ ಜನರ ಗಬ್ಬು ಸಂಘಟನೆಯೆಲ್ಲಿ?

Monday, July 5, 2010

"ಭಾರತೀಯರಿಗೆ ಆಳುವುದು ಗೊತ್ತಿಲ್ಲ.. ಆಳಿಸಿಕೊಳ್ಳಲಿಕ್ಕೆ ಅವರು ಲಾಯಕ್ಕು"

ಯಾರೋ ತಲೆಗೆ ಹೊಡೆದಂತೆ ತಟ್ಟನೆ ಎಚ್ಚರವಾಯ್ತು. ಹಾಗೆ ಮೊಬೈಲ್ ನೋಡಿದೆ. ರಾತ್ರಿ 2 ಘಂಟೆ ಅಂತ ಹೇಳಿ ನಸು ನಗುತ್ತಿತ್ತು. ಅಸ್ಥ್ತರಲ್ಲೇ ಕುಯ್ನ್ ಕುಯ್ನ್ ಅಂತ ಮೊಬೈಲ್ ಹೊಯ್ಕೊಳ್ಳಲಿಕ್ಕೆ ಶುರು ಮಾಡ್ತು. ಏನಪ್ಪಾ ಇದರ ರಾಗ ಅಂತ ನೋಡಿದ್ರೆ ನನ್ನ ಕೊಲ್ಲೀಗ್ ಅನಂತ ಮೆಸೇಜ್ ಮಾಡಿದ್ದ

"It seems some problem happened in mysore road bcos of bharath band. be carefull. Better don;t come to office tomorrow work from home"

ಹ್ಮ್ಮ್..ಕ್ಷಣ ಕಾಲ ಏನೇನೂ ಅರ್ಥವಾಗಲಿಲ್ಲ... ನಂತರದಲ್ಲಿ ಅರ್ಥವಾಗಲು ಶುರುವಾದ ವಿಷಯಗಳು ಮತ್ತೆ ನಿದ್ದೆ ಮಾಡಲು ಬಿಡಲಿಲ್ಲ..

ಎಲ್ಲಿ ತಪ್ಪಾಯ್ತು? ಯಾರಿಂದ? ಯಾವಾಗಿಂದ? ಹೂಸಿದ್ರೂ, ಕೆಮ್ಮಿದ್ರೂ ಬಂದಿಗೆ ಕರೆಕೊಡೋ ಮೂರೂ ಬಿಟ್ಟ ನಮ್ಮ ರಾಜಕಾರಣಿಗಳಾ? ತಿಳಿದೂ ತಿಳಿದೋ ಅವರು ಕೊಡುವ ಪುಡಿ ಕಾಸಿಗೆ ಕೈಯೊಡ್ಡಿ ಬೇಕೋ ಬೇಡವೋ ಹೇಳುವವರಿಗೆ ವೋಟು ಕೊಟ್ಟು ನಂತರ ವರ್ಷಪೂರ್ತಿ ಶಪಿಸಿ ಮುಂದಿನ ಚುನಾವಣೆಯಲ್ಲಿ ಮತ್ತೆ ಅವನ ಎಂಜಲಿಗೆ ನಿಲ್ಲುವ ನಮ್ಮ ಶ್ರೀ ಸಾಮಾನ್ಯನಾ? ಏನ್ ಮಾಡಿದರೂ ಈ ದೇಶದ ಕಥೆ ಇಷ್ಟೇ ಅಂತ ಹೇಳಿ ವೋಟಿನ ದಿನ ಮಾಲ್, ಮೂವಿ,ಮಸ್ತಿ, ಔಟಿಂಗ್ ಅಂತ ಜವಾಬ್ದಾರಿ ಹೀನರಾಗೋ ನಮ್ಮ ಟೆಕ್ಕಿಗಳಾ? ಯಾರು, ಯಾರು ಇದಕ್ಕೆ ಕಾರಣ? ಆಗ ಅನ್ನಿಸಿದ್ದು.. ಒಹ್ ಇವರಾರೂ ಅಲ್ಲ... ಭಾರತದ ಇಂದಿನ ದುರ್ಗತಿಯ ಬೇರುಗಳು ನಮ್ಮ ನಲವತ್ತೇಳರ ಸ್ವಾತಂತ್ರದ ರಾತ್ರಿಯಿಂದಲೇ ಶುರುವಾಗಿವೆ ಅನ್ನಿಸಿತು.

ಭಾರತದ ಇತಿಹಾಸದ ಅಮೋಘ ಕ್ಷಣ ನಲವತ್ತೇಳರ ಸ್ವಾತಂತ್ರ್ಯ. ಒಂದು ಹನಿ ರಕ್ತ ಹರಿಸದೆ, ಮೂಲ ಬೆಲೆಯನ್ನೇ ಅರಿಯದೆ ನಾವು ಪಡೆದ ಏಕೈಕ ವಸ್ತು "ಸ್ವಾತಂತ್ರ್ಯ". 1857ರಿಂದ 1947ರ ವರಗೆ ಎಲ್ಲರ ಮನದಲ್ಲಿ ಇದ್ದ ಸ್ವಾತ್ರಂತ್ರ್ಯವನ್ನ ಕಾಡಿ ಬೇಡಿ ಪಡೆದ ಕ್ಷಣ ಎಲ್ಲರ ಮನದಲ್ಲಿ ಮೂಡಿದ್ದು "ಮುಂದೆ ಏನು"? ದೇಶವಾಳಲರಿಯದ ಮಧ್ಯಮ ವರ್ಗದ ಶಿಕ್ಷಕ ವೃಂದ, ವಣಿಕ, ಧನಿಕ ಹಾಗು ಹಸಿ ಬಿಸಿ ಯುವಜನರಿಂದಲೇ ತುಂಬಿದ್ದ ಸ್ವಾತಂತ್ರ್ಯ ಸಂಗ್ರಾಮ ಸ್ವಾತಂತ್ರ್ಯದ ನಂತರ ಅವರುಗಳಿಗೆ ತಿಳಿಸಿದ್ದಂತೆ ಕೆಲವು ಜವಾಬ್ದಾರಿಯುತ ಸ್ಥಾನಗಳನ್ನೂ ಕೊಡಮಾಡಬೇಕಾಗಿ ಬಂತು. ದೇಶದ ಪ್ರಗತಿ ಕುರಿತು ದೂ[ದು]ರಾಲೋಚನೆಯಿರುವ, ಆ ದಿಶೆಯಡೆ ದೇಶವನ್ನು ಕೊಂಡೊಯ್ಯುವ ಮುತ್ಸದಿಯ ನಾಯಕತ್ವದ ಪ್ರಶ್ನೆ ಬಂದಾಗ ಎಲ್ಲರೂ ಅದಕ್ಕೆ ಮುಖ್ಯವಾಗಿ ಬೇಕಾದ ವಾಕ್ ಪ್ರತಿಭೆ, english ಭಾಷೆಯಲ್ಲಿನ ಪ್ರಭುತ್ವತೆ ಹೊಂದಿದ್ದೆ ನೆಹರೂರನ್ನೆ ನಾಯಕರನ್ನಾಗಿ ಮಾಡಿ, "ಬಿಡು, ಅವ ಎಲ್ಲ ನೋಡ್ಕೋತಾನ, ನಾಮ್ ಆರಾಮ್ ಇರೋಣು" ಅನ್ನೋ ಮನೋಭಾವನೆಯಲ್ಲಿ ದೊರೆತ ಸ್ವಾತಂತ್ರದ ಅರ್ಥ ಹುಡುಕಲೆತ್ನಿಸಿದರು.

ಶುರುವಾತಿನಲ್ಲಿ ಎಲ್ಲ ಚೆನ್ನಾಗೆ ಕಾಣುತಿತ್ತು. ಹರಿದು ಹಂಚಿದ್ದ ಭಾರತವನ್ನು ಸರದಾರರು ಒಂದುಗೂಡಿಸುವ ಕ್ಷಣದಲ್ಲೇ ಅಂಬೇಡ್ಕರರು ತಮ್ಮ[ನಮ್ಮ] ಸಂವಿಧಾನವನ್ನ ರೂಪಿಸಿದ್ದರು. ಹಿಂಸಾತ್ಮಕವಾಗಿ ರಚಿತವಾದ ಪಾಕಿಸ್ತಾನದಿಂದ ತಪ್ಪಿಸಿಕೊಳ್ಳಲು ಭಾರತ ಸೇರಿದ ಕಾಶ್ಮೀರದ ರಾಜ ಹರಿಸಿಂಗ. ನಮ್ಮದೇ ಸರ್ಕಾರ.. ರಾಮ ರಾಜ್ಯದ ಕನಸು ನನಸಾಯಿತು. ಚರ್ಚಿಲ್ಲನು ಹೇಳಿದ "ಭಾರತೀಯರಿಗೆ ಆಳುವುದು ಗೊತ್ತಿಲ್ಲ.. ಆಳಿಸಿಕೊಳ್ಳಲಿಕ್ಕೆ ಅವರು ಲಾಯಕ್ಕು" ಇನ್ನುವ ಮಾತು ಸುಳ್ಳಾಗುವ ದಿನಗಳಿದ್ದವು ಅವು. ನಮ್ಮ ನೆಹರು ಪ್ರಧಾನಿಯಾಗುವ ತನಕ.

ನಮ್ಮ ದೇಶದ ಅದೃಷ್ಟವೋ , ದುರಾದೃಷ್ಟವೋ ತಿಳಿಯುತ್ತಿಲ್ಲ.. ನೆಹರುಗಳು ಮಾಡಿದ ಹಲವು ಅಕ್ಷಮ್ಯ ತಪ್ಪು ನಡಿಗೆಗಳು ದೇಶವನ್ನು ಶತ ಶತಮಾನದ ನಂತರವೂ ಕಾಡುವ ಸಮಸ್ಯೆಗಳನ್ನು ಬಗ್ಗುಲಲ್ಲಿ ಸೃಷ್ಟಿಸಿದವು.

೧. ಲಕ್ಷಾಂತರ ಜನರ ನೋವಿನ, ಸಾವಿನ ದನಿಯಾಗಿ ರೂಪಿತವಾದ ಪಾಕಿಸ್ತಾನ 1948ರಂದು ನಮ್ಮ ಮೇಲೆ ದಂಡೆತ್ತಿ ಬಂದಾಗ ಸರದಾರರು ಕೊಚ್ಚೆ ನಾಯಿಗೆ ಹೊಡೆಯುವಂತೆ ಯುದ್ದರಂಗದಿಂದ ಅವರನ್ನು ಹೊರ ಹಟ್ಟುವ ಹವಣಿಕೆಯಲ್ಲಿದಾಗ ನಮ್ಮ ಚಾಚ ನೆಹರು ತಮ್ಮ ಮುಸ್ಲಿಂ ಸ್ನೇಹಿತರಿಗಾಗಿ ಗೆಲ್ಲುತ್ತಿದ್ದ ನಮ್ಮ ಸೈನ್ಯವನ್ನು ಹಿಂತೆಗೆದುಕೊಂಡರು. ನಮ್ಮ 2/3ರಷ್ಟು ಕಾಶ್ಮೀರ ನಮ್ಮ ಕೈಬಿಟ್ಟು ಹೋದಾಗ್ಯೂ ನೆಹರು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆ ಮುಂದೆ ತೆಗೆದುಕೊಂಡು ಹೋದರು. ಸೂಜಿಯಲ್ಲಿ ಮಾಡಬೇಕಿದ್ದ ಕೆಲಸವನ್ನ ಬೆಟ್ಟ ಮಾಡಿ ಇಟ್ಟರು. ಪರಿಣಾಮ ಇಂದಿಗೂ ನಾವು ಅನುಭವಿಸುತ್ತಿದ್ದೇವೆ.
೨. ದೇಶ ಅನಾಚೂನವಾಗಿ ಬೆಳೆದು ಬಂದದ್ದೇ ಗ್ರಾಮ ಸ್ವರಾಜ್ಯದ ಆಧಾರದ ಮೇಲೆ. ಲಕ್ಷಾಂತರ ಹಳ್ಳಿಗಳು ಉದ್ಧಾರವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ತತ್ವದ ನಿಲುಕಲ್ಲೇ ಭಾರತ ಅಸ್ತಿತ್ವದಲ್ಲಿತ್ತು. ಆದರೆ ನೆಹರೂ ಅವೆಲ್ಲವನ್ನೂ ತಿರಸ್ಕರಿಸಿದರು. ದೊಡ್ಡ ದೊಡ್ಡ ಯಂತ್ರಗಳು ಗೃಹಕೈಗಾರಿಕೆಗಳನ್ನು ಮೀರಿ ಬೆಳೆಯಬೇಕು. ಆಗ ದೇಶದಲ್ಲಿ ಹಣ ಸಂಗ್ರಹವಾಗುತ್ತದೆ. ಆ ಹಣ ಬಡವರಿಗೂ ಸೇರುತ್ತದೆ ಎಂಬ ಯೋಚನೆಯಲ್ಲಿ, ದ್ವಂದ್ವ ನಿಲುವಿನ ಗಾಂಧೀಜಿಯಂತಹ ಮಹಾನ್ ವ್ಯಕ್ತಿಯೊಂದಿಗೆ ಒಡನಾಡಿಯೂ ತಮ್ಮ ಆ ತನಕದ ಆಡಂಬರತನವನ್ನು ಬದಲಿಸಿಕೊಂಡು ಸರಳವಾಗಲಾರದ ವ್ಯಕ್ತಿ, ಸರಳವಾಗಿದ್ದ ದೇಶವನ್ನು ದಿಢೀರ್ ಸಿರಿವಂತಿಕೆಯತ್ತ ಎಳೆದು ತರುವ ಯೋಚನೆಗೆ ಶುರುವಿಟ್ಟರು.
ನೆಹರೂ ಸ್ವತಃ ಆರ್ಥಿಕ ತಜ್ಞರಲ್ಲ , ಯಂತ್ರಗಳ ಬಗ್ಗೆ ಮಾತನಾಡಬಲ್ಲ ಇಂಜಿನಿಯರೂ ಆಗಿರಲಿಲ್ಲ. ಅವರು ಬರಿ ಕನಸುಗಾರರಾಗಿದ್ದರು. ತಾವು ಕಂಡ ಕನಸನ್ನು ನನಸುಗೊಳಿಸಬೇಕು. ಆ ಮಾರ್ಗದಲ್ಲಿರುವ ತೊಡಕುಗಳು ಏನೇ ಇರಲಿ, ಅದರಿಂದ ದೇಶ ನಿರ್ನಾಮವಾಗಿಯೇ ಹೋಗಲಿ ಚಿಂತೆ ಇಲ್ಲ. ಕನಸು ಮಾತ್ರ ಸಾಕಾರವಾಗಬೇಕು ಎಂಬ ಹುಚ್ಚು ಅವರಲ್ಲಿತ್ತು! ಅದಕ್ಕೆ ಮೆಹಲೋನವೀಸ್ ಎಂಬುವವನ ಜೊತೆ ಪಡೆದರು.ವಾಸ್ತವವಾಗಿ ಆಗತಾನೆ ಸ್ವಾತಂತ್ರ್ಯ ಪಡೆದ ದೇಶ ತನ್ನ ಆಂತರಿಕ ಶಕ್ತಿ ಯಾವುದೆಂದು ಗುರುತಿಸಿಕೊಂಡು ಅದನ್ನು ಸೂಕ್ತವಾಗಿ ಬಳಸಿಕೊಳ್ಳುವ ಮೂಲಕ ಬೆಳೆಯಬೇಕು. ಅದನ್ನು ಬಿಟ್ಟು, ಅವರು ಹಾಗೆ ಬೆಳೆದಿದ್ದಾರೆ; ಇವರು ಹೀಗೆ ಬೆಳೆದಿದ್ದಾರೆ ಎನ್ನುತ್ತಾ ಕುಳಿತರೆ, ಅವರನ್ನು ಅನುಸರಿಸುವ ಪ್ರಯತ್ನ ಮಾಡಿದರೆ ಖಂಡಿತ ಬೆಳವಣಿಗೆ ಅಸಾಧ್ಯ. ಭಾರತದ ಮಟ್ಟಿಗೆ ಹೇಳುವುದಾದರೆ, ಗ್ರಾಮಶಕ್ತಿ ಇಲ್ಲಿನ ಆಂತರಿಕ ಶಕ್ತಿ. ಅಲ್ಲಿ ಕಳೆದು ಹೋಗುತ್ತಿರುವ ನಮ್ಮವರ ಕೊಡು-ಕೊಳ್ಳು ಸಂಸ್ಕೃತಿಯನ್ನ,ಕೆಲಸಗಳನ್ನು ಬಳಸಿಕೊಳ್ಳಬೇಕಿತ್ತು. ಕೃಷಿ ಕಾರ್ಯದಲ್ಲಿ ಕ್ಷಮತೆಯನ್ನು ಹೆಚ್ಚಿಸುವ ಯತ್ನ ಮಾಡಬೇಕಿತ್ತು. ಆದರೆ ನೆಹರೂ ಅವೆಲ್ಲವನ್ನು ಬದಿಗಿಟ್ಟು ಕೈಗಾರಿಕೀಕರಣ ಮಾಡುವ ಪ್ರಯತ್ನ ಶುರುವಿಟ್ಟರು. ಅದಕ್ಕೆ ಹಣ ಎಲ್ಲಿಂದ ತರಬೇಕು? ಸಾಲ ತಂದರು. ಮೊದಲ ಬಾರಿಗೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಲ ಎತ್ತುವ ಚಾಳಿ ಶುರುವಿಟ್ಟಿತು. ಆ ಹಣವನ್ನು ನೆಹರೂ ಎಲ್ಲೆಲ್ಲಿ ಹೂಡಿಕೆ ಮಾಡಿದರೋ ಅಲ್ಲಿಂದ ಹೇಳುವಷ್ಟು ಹಣ ಹುಟ್ಟಲಿಲ್ಲ. ಮತ್ತೆ ಸಾಲ-ಮತ್ತೆ ನಷ್ಟ. ಈ ಚಕ್ರ ಎಲ್ಲಿಯವರೆಗೂ ಮುಂದುವರೆಯಿತೆಂದರೆ, ಇಂದು ಸಾಲದ ಮೇಲೆಯೇ ಬದುಕುವ ಚಟವನ್ನು ನಮ್ಮ ಮೂರು ಬಿಟ್ಟ ರಾಜಕಾರಣಿಗಳು ರೂಡಿಸಿಕೊಂಡಿದ್ದಾರೆ. ದೇಶ ಅಕ್ಷರಶಃ ಸಾಲದ ಉರುಳಲ್ಲಿ ಸಿಕ್ಕು ಒದ್ದಾಡುತ್ತಿದೆ. ನೆಹರೂ ಹುಟ್ಟಿಸಿದ ಆ ಆರ್ಥಿಕ ಕೂಸು ನೆಹರೂ ಕಾಲದಲ್ಲಿಯೇ ಸತ್ತುಹೋಯಿತು. ಈ ದೇಶದ ಜನ ಅಪಾರ ತೆರಿಗೆ ಕಟ್ಟುವ ಮೂಲಕ ಆ ಕೂಸಿಗೆ ಕೃತಕ ಉಸಿರಾಟ ಮಾಡುತ್ತಿದ್ದಾರೆಯೇ ಹೊರತು ಮತ್ತೇನಲ್ಲ!

ನೆಹರೂ, Public sector Unitಗಳನ್ನ ಸರ್ಕಾರದ ವಶಕ್ಕೆ ಪಡೆದರು. ಗೃಹಕೈಗಾರಿಕೆಗಳನ್ನು ನಡೆಸುವುದು, ಅಲ್ಲಿನ ವಸ್ತುಗಳನ್ನು ಮಾರುಕಟ್ಟೆಗೊಯ್ಯುವುದು ಇವಲ್ಲಾ ಸಾಧ್ಯವಾದಷ್ಟೂ ಕಷ್ಟವಾಗುವಂತೆ ನೋಡಿಕೊಂಡರು. ಲೈಸೆನ್ಸು, ಪರ್ಮಿಟ್ಟು ಎಂದೆಲ್ಲ ರಗಳೆಗಳು ಶುರುವಾಗಿದ್ದು ಇದೇ ಕಾಲಕ್ಕೆ. ಸಮಾಜವಾದದ ಹೆಸರಲ್ಲಿ, ಸರ್ವರಿಗೂ ಸಮಪಾಲು ಎನ್ನುತ್ತಿದ್ದ ನೆಹರೂ ಕೊನೆಗಾಲಕ್ಕೆ ಈ ರೀತಿ ಬದಲಾದದ್ದು, ಬಡವರ ಶೋಷಣೆಗೆ ನಿಂತದ್ದು ಎಲ್ಲರಿಗೂ ಅಚ್ಚರಿತಂದಿತ್ತು. ಬಡತನ ನಿರ್ಮೂಲನೆಗೆ ಎಂದು ಶುರುವಿಟ್ಟ ಆರ್ಥಿಕ ಯೋಜನೆಗಳು ಬಡವರ ನಿರ್ಮೂಲನೆ ಮಾಡಿದ್ದು ಖಂಡಿತ ಸುಳ್ಳಲ್ಲ.

ಇದೇ ವೇಳೆಗೆ, ಭಾರತದ ನಂತರ ಸ್ವಾತಂತ್ರ್ಯ ಪಡೆದಿದ್ದ ರಾಷ್ಟ್ರಗಳೆಲ್ಲ ಮಿಂಚಿನಂತೆ ಬೆಳೆದವು. ರಾಷ್ಟ್ರದ ಅಂತಃಶಕ್ತಿಯನ್ನು ಗುರುತಿಸಿ, ನಿಸ್ವಾರ್ಥತೆಯಿಂದ ರಾಷ್ಟ್ರವನ್ನು ಮುನ್ನಡೆಸಿದವರೆಲ್ಲ ಜಗತ್ತಿನ ಭೂಪಟದಲ್ಲಿ ಕಂಗೊಳಿಸುವಂತೆ ಬೆಳೆದರು. ಅಲ್ಲಿ ಬೆಳೆದದ್ದು ವೈಯಕ್ತಿಕವಾಗಿ ಆ ವ್ಯಕ್ತಿಗಳಲ್ಲ , ರಾಷ್ಟ್ರ!. ಆದರೆ ಭಾರತದಲ್ಲಿ ನೆಹರೂ ಹಠಕ್ಕೆ ಬಿದ್ದು, ತಾವು ಬೆಳೆಯಬೇಕೆಂದರು. ಜಗತ್ತಿನ ಎಲ್ಲ ರಾಷ್ಟ್ರಗಳು ತನ್ನ ಬಗ್ಗೆಯೇ ಮಾತಾಡಬೇಕೆಂದು ಆಶಿಸಿದರು. ಆ ಆಸೆಯ ಪೂರೈಕೆಗಾಗಿ ದೇಶದ ಹಿತಾಸಕ್ತಿಗಳನ್ನು ಬಲಿಕೊಡಲಿಕ್ಕೂ ಅವರು ಹಿಂದೆ-ಮುಂದೆ ನೋಡಲಿಲ್ಲ!!

ಭಾರತ ಸ್ವತಂತ್ರವಾಗಿ ಬಹುಕಾಲದ ನಂತರ ಅಕಾರ ಪಡೆದ ಸಿಂಗಾಪೂರದ ಲೀ ಕ್ವಾನ್‌ಯೂರನ್ನು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತ. ಸ್ಪಷ್ಟ ಉದ್ದೇಶ, ಚಿಂತನೆಗಳೊಂದಿಗೆ ದೇಶವನ್ನು ಎತ್ತರಕ್ಕೆ ಬೆಳೆಸಬೇಕೆಂಬ ಹಠಕ್ಕೆ ಬಿದ್ದ ಕ್ವಾನ್‌ಯೂ ಅಂತಾರಾಷ್ಟ್ರೀಯ ಮಟ್ಟದಿಂದ ವ್ಯಾಪಾರಿಗಳನ್ನು ಸಿಂಗಾಪೂರಕ್ಕೆ ಸೆಳೆದರು. ಅದೇ ವೇಳೆಗೆ ಸಿಂಗಾಪೂರದ ಕಲೆ ಜಗತ್ತು ಮೆಚ್ಚುವಂತೆ ನೋಡಿಕೊಂಡರು. ಸಿಂಗಪೂರ್ ನೋಡುತ್ತ, ನೋಡುತ್ತ ಕಣ್ಣು ಕುಕ್ಕುವ ನಗರವಾಗಿಬಿಟ್ಟಿತು. ಕ್ವಾನ್‌ಯೂ ಒಮ್ಮೆ ಮಾತನಾಡುತ್ತ, ‘ಹೊರಗಡೆಯಿಂದ ಬರುವ ತಂತ್ರಜ್ಞಾನ, ಬಂಡವಾಳವನ್ನು ಸಿಂಗಾಪೂರ ಸ್ವಾಗತಿಸುತ್ತಿದೆ. ಆದರೆ ಆ ನೆಪದಲ್ಲಿ ಅದು ತನ್ನತನವನ್ನು ಕಳೆದುಕೊಳ್ಳಲು ಸಿದ್ಧವಿಲ್ಲ’ ಎಂದಿದ್ದರು. ‘ನಾಯಕರು, ಅಕಾರಿಗಳು, ನಿರ್ಣಯ ಮಾಡಬಲ್ಲ ಜನ ಇವರೆಲ್ಲ ಮೊದಲು ಶಿಸ್ತನ್ನು ಪಾಲಿಸಬೇಕು. ಶಿಸ್ತನ್ನು ಇತರರ ಮೇಲೆ ಹೇರುವ ಮುನ್ನ ಅದನ್ನು ಅನುಸರಿಸಿ ತೋರಿಸಬೇಕು. ಅವರು ಮೊದಲು ಭ್ರಷ್ಟಾಚಾರರಹಿತರಾಗಿ ಜನರಿಗೆ ಉದಾಹರಣೆಯಾಗಬೇಕು’ ಎಂದೂ ಹೇಳಿದ್ದರು. ಅವೆಲ್ಲ ನೆಹರೂ ಕಿವಿಗೆ ಬೀಳುವುದು ಸಾಧ್ಯವೇ ಇರಲಿಲ್ಲ. ಬಿದ್ದರೂ ಕ್ವಾನ್‌ಯೂ ಹೇಳಿದ ಯಾವುದನ್ನೂ ಅವರಿಗೆ ಮಾಡಿ ತೋರಿಸುವುದು ಸಾಧ್ಯವಿರಲಿಲ್ಲ. ಶಿಸ್ತು, ಚಿಂತನೆಗಳಲ್ಲಿನ ಸ್ಪಷ್ಟತೆ, ಇವು ನೆಹರೂ ಪಾಲಿಗೆ ದೂರ-ಬಹುದೂರ! ಚೆಂದದ ಬಟ್ಟೆ, ಭಾಷಣ, ಹೊಗಳುಭಟರ ಸಹವಾಸ ಅವರಿಗೆ ಹೇಳಿ ಮಾಡಿಸಿದಂಥವಾಗಿದ್ದವು!
‘ನಿಮ್ಮ ದೇಶದಲ್ಲಿ ಪ್ರತಿಭೆಗಳಿಗೆ ಸೂಕ್ತ ಅವಕಾಶಕೊಡುತ್ತಿಲ್ಲ. ಅವರಿಗೆ ತಮ್ಮ ಸಾಧನೆ ತೋರ್ಪಡಿಸಲು ಅನುಕೂಲವಾಗುವಂತಹ, ಆರ್ಥಿಕ-ಸಾಮಾಜಿಕ-ರಾಜಕೀಯ ಪರಿಸರದ ನಿರ್ಮಾಣ ಮಾಡಿಕೊಡುತ್ತಿಲ್ಲ. ಇದೇ ಭಾರತೀಯರು ಸಿಂಗಾಪೂರಕ್ಕೆ ಬಂದರೆ ಅದ್ಭುತ ಸಾಧನೆ ಮಾಡುತ್ತಾರೆ. ಆದರೆ ಇಲ್ಲಿ ಅವರಿಂದ ಸಾಧ್ಯವಿಲ್ಲ’ ಮುಂತಾದ ವಿಚಾರಗಳನ್ನು ಮನಸ್ಸಿಗೆ ನಾಟುವಂತೆ ಹೇಳಿ ‘ಭಾರತ ಬೆಳೆದರೆ ನಮಗೆ ಲಾಭವಿದೆ. ಅದಕ್ಕೆ ಸ್ವಾರ್ಥದಿಂದ ಭಾರತ ಬೆಳೆಯಲಿ ಎಂದು ಆಶಿಸುತ್ತಿದ್ದೇನೆ’ ಎಂದು ಕ್ವಾನ್‌ಯೂ ಹೇಳಿದ್ದರು.
ಏಷ್ಯಾದ ಬಹುತೇಕ ರಾಷ್ಟ್ರಗಳು ಹೀಗೆ ಭಾರತ ಆರ್ಥಿಕವಾಗಿ ಶಕ್ತಿಯುತವಾಗುವುದನ್ನು ಕಾಯುತ್ತ ಕುಳಿತಿದ್ದವು. ದಶಕಗಳಷ್ಟು ದೀರ್ಘಕಾಲ ಕಾದವು. ಭಾರತ ಪ್ರಬಲವಾಗುವ ಬದಲು, ಆರ್ಥಿಕವಾಗಿ ದುರ್ಬಲವಾಗುತ್ತ ಸಾಗಿದಂತೆಲ್ಲ ಹತಪ್ರಭವಾದವು. ಜಪಾನ್-ಚೀನಾಗಳ ಮೊರೆಹೊಕ್ಕು ಸುಮ್ಮನಾದವು. ನೆಹರೂ ಯೋಜನೆಗಳ ಮೇಲೆ ಯೋಜನೆಗಳನ್ನು ರೂಪಿಸಿದರು. ಪ್ರತಿಯೊಂದೂ ಬಡ ಭಾರತದಲ್ಲಿ ಸಂಪತ್ತನ್ನು ಸೃಷ್ಟಿಸುವ (ನೆನಪಿಡಿ! ಸಂಪತ್ತನ್ನು ಗಳಿಸುವುದಲ್ಲ ) ಯೋಜನೆಗಳೇ ಆದವು. ಅದಕ್ಕೆ ಸಾಲ ತರಲಾಯಿತು. ತಂದ ಸಾಲದಲ್ಲಿ ಬಹುಪಾಲು ನೆಹರೂ ಮತ್ತವರ ತಂಡಕ್ಕೇ ಖರ್ಚಾಯಿತು. ಮಂತ್ರಿಗಳು -ರಾಜಕಾರಣಿಗಳು-ಅಕಾರಿವರ್ಗ ಇವರೆಲ್ಲರ ಖರ್ಚುವೆಚ್ಚ ಅಷ್ಟು ಅಪಾರವಾಗಿತ್ತು!

ಭಾರತದಲ್ಲಿ ಹುಟ್ಟುತ್ತಿರುವ -ಇನ್ನೂ ಹುಟ್ಟದಿರುವ ಮಗುವೂ ಕೂಡ ಸಾಲದ ಹೊರೆ ಹೊರಲೇಬೇಕಾಯಿತು. ಮತ್ತು ಪರಿಸ್ಥಿತಿಗಳನ್ನು ಅವಲೋಕಿಸಿದ ರಾಷ್ಟ್ರಪತಿ ಡಾ ಬಾಬು ರಾಜೇಂದ್ರ ಪ್ರಸಾದರು ದ್ವಿತೀಯ ಪಂಚವಾರ್ಷಿಕ ಯೋಜನೆ (೨ನೇ ಜೂನ್ ೧೯೫೭)ಯ ಮುನ್ನ ನೆಹರೂಗೆ ಪತ್ರ ಬರೆದರು, ‘ನಾವು ಯೋಜನೆಗಳಲ್ಲಿ ತೊಡಗಿಸುತ್ತಿರುವ ಹಣ ಸರಿಯಾಗಿ ಬಳಕೆಯಾಗುತ್ತಿದೆಯೋ ಇಲ್ಲವೋ ಎಂಬುದನ್ನು ಗಮನಿಸಲಿಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ ಎಂದು ಭಾವಿಸಿದ್ದೇನೆ…. ಹಾಗೇನಾದರೂ ಆಗದಿದ್ದಲ್ಲಿ, ಜನರ ಬೆವರಿನ ಹಣ, ತ್ಯಾಗದ ಹಣ ವಿಪತ್ತಿಗಾಗಿ ಖರ್ಚಾದಂತಾಗುತ್ತದೆ. ನಾವು ಎರಡನೇ ಪಂಚವಾರ್ಷಿಕ ಯೋಜನೆಗಳಿಗೆಂದೇ ಜನರ ಮೇಲೆ ತೆರಿಗೆಯ ಭಾರ ಹೇರಿದ್ದೇವೆ. ಆದರೆ ಇದೇ ಸಂದರ್ಭದಲ್ಲಿ ಹೊಸ ಆರ್ಥಿಕ ನೀತಿಯನ್ನು ಜಾರಿಗೆ ತರಲು, ಆಡಳಿತಕ್ಕೆಂದು ಮಾಡುತ್ತಿರುವ ಖರ್ಚನ್ನು ಕಡಿತಗೊಳಿಸಲು ಯಾವ-ಯಾವ ಕ್ರಮಗಳನ್ನು ಕೈಗೊಂಡಿದ್ದೇವೆಂಬುದು ನನಗೆ ತಿಳಿಯುತ್ತಿಲ್ಲ. ಹನಿ ಹನಿ ಸೋರಿ ಅದು ಖಾಲಿಯೂ ಆಗಬಹುದು. ಅದಕ್ಕೆ ಪ್ರತಿಯೊಂದು ವಿಭಾಗಗಳೂ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಯಾವುದೇ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಅದು ನಮ್ಮ ಆರ್ಥಿಕ ಪರಿಸ್ಥಿತಿಗೆ ಸೂಕ್ತವಾಗಿ ಹೊಂದಾಣಿಕೆಯಾಗುವಂತಿರಬೇಕು. ಕೊರತೆ ನಿರ್ಮಾಣವಾಗಿ ಜನರ ಮೇಲೆ ತೆರಿಗೆಯ ಭಾರ ಅಕವಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಇರಬೇಕು’ ಎಂದೆಲ್ಲ ಬುದ್ಧಿಮಾತು ಹೇಳಿದ್ದರು.'

ಕೇಳುವ ವ್ಯವಧಾನ ನೆಹರೂಗಿರಲಿಲ್ಲ. ಆ ಪತ್ರ ಅದ್ಯಾವ ಬುಟ್ಟಿ ಸೇರಿತೋ ದೇವರೇ ಬಲ್ಲ.

ನೆಹರೂ ಪಾಲಿಗೆ ಸರ್ಕಾರ ನಡೆಸುವುದೆಂದರೆ ಐಷಾರಾಮಿ ಹೋಟೇಲು ನಡೆಸಿದಂತೆ. ಅಲ್ಲಿ ಎಲ್ಲವೂ ವೈಭವೋಪೇತವಾಗಿರಬೇಕು. ಅದಕ್ಕೆ ಅಗತ್ಯವಿರುವಷ್ಟು ಹಣ ದೊರೆಯದಿದ್ದರೆ ಸಾಲವಾದರೂ ತರಬೇಕು. ಇದು ಅವರ ಚಿಂತನೆ. ಅದಕ್ಕೆ ತಕ್ಕಂತೆ ಭಾರತ ಒಂದು ವೈಭವೋಪೇತ ಹೋಟೆಲಿನಂತಾಯಿತೇ ಹೊರತು ರಾಷ್ಟ್ರವಾಗಲಿಲ್ಲ, ಶಕ್ತಿಯಾಗಲಿಲ್ಲ!

ಯೋಜನೆಗಳ ಹೆಸರಿನಲ್ಲಿ ಖರ್ಚು ಮಾಡಿದ ಒಂದೊಂದು ಹಣವೂ ಸೇರಬೇಕಾದ ಸ್ಥಳ ಸೇರಲಿಲ್ಲ. ಕೆಲಸವೇನೋ ಬೇಕಾದಷ್ಟಾಯ್ತು. ಆದರೆ ಗುಣಮಟ್ಟ ಕಳಪೆಯಾಯಿತು. ೧೯೫೨-೫೩ರಲ್ಲಿ ಒಂದು ಕೊಳವೆ ಬಾವಿ ೨೦೦ ಎಕರೆಗಳ ಭೂಮಿಗೆ ನೀರುಣಿಸಲು ಶಕ್ತವಾಗಿದ್ದರೆ, ಪಂಚವಾರ್ಷಿಕ ಯೋಜನೆಗಳ ಫಲವಾಗಿ ಸಿಕ್ಕಸಿಕ್ಕಲ್ಲಿ ಕೊರೆದ ಕೊಳವೆ ಬಾವಿಗಳು ೧೯೫೫-೫೬ರ ವೇಳೆಗೆ ಸರಾಸರಿ ೬೦ ಎಕರೆ ಭೂಮಿಯನ್ನು ಮಾತ್ರ ತಣಿಸಬಲ್ಲವಾಗಿದ್ದವು. ಹಣ ಸುರಿದದ್ದು ವ್ಯರ್ಥವಾಗಿತ್ತು. ಸರ್ಕಾರ ಜನ ಮಾಡುತ್ತಿದ್ದ ಕೆಲಸಗಳನ್ನು ತಾನೇ ಮಾಡಲು ಮುಂದಾದ್ದರಿಂದ ಜನರೂ ಆಲಸಿಗಳಾದರು. ಕೆರೆ ಹೂಳೆತ್ತಬೇಕಿದ್ದರೂ ಸರ್ಕಾರದ ಮರ್ಜಿಗೆ ಕಾಯಲು ಶುರುವಿಟ್ಟರು. ಇಡಿಯ ದೇಶ ನೈತಿಕ ತಳಹದಿಯನ್ನು ಕಳೆದುಕೊಳ್ಳಲು ಶುರುವಿಟ್ಟಿತು.

೩. ಚೀನಾದೊಂದಿಗೆ ಹಿಂದಿ-ಚೀನೀ ಭಾಯಿ ಭಾಯಿ ಎಂಬ ಎಡಬಿಡಂಗಿ ಸಿದ್ದಾಂತದಲ್ಲಿ ಹೆಣಗಿ ಸಾರಿರಾರು ಚದರ ಮೈಲಿ ಭೂಮಿಯನ್ನೂ, ಸಾವಿರಾರು ಧೀರ ಯೋಧರನೂ ಚೀನಾಗೆ ಬಲಿಕೊಟ್ಟ ನೆಹರು ನಂತರದಲ್ಲೂ ತಮ್ಮ ಅನುಭವಗಳಿಂದ ಪಾಠಕಲಿಯಲಿಲ್ಲ. ನಂತರದಲ್ಲಿ ಜನತೆ ಎಚ್ಚೆತ್ತು ಅಯ್ಯಯ್ಯೋ ಏನೇನೂ ಸರಿಯಿಲ್ಲ.. ನೆಹರು ಅಂಥಾ ಹೇಳಿಕೊಳ್ಳುವಂತ ನಂಬಿಕಸ್ತನಲ್ಲ ಎಂದು ತಿಳಿವ ಹೊತ್ತಿಗೆ ಊರು ಹಾಳಾಗಿತ್ತು. ನಂತರ ನಾವು ಹಾಕಿದ ಕೋಟೆ ಬಾಗಿಲಿಗೂ ಚಿಲಕ ಹಾಕಲು ನಾವು ಮರೆತೆವು. ದೇಶದ ಪಕ್ಕೆಯಲ್ಲಿ ರಕ್ತ ಒಸರಲು ಶುರುವಾಯ್ತು. ಭಾರತವೆಂಬ ಹುಚ್ಚಿಯ ಮದುವೆಯಲ್ಲಿ ಉಣ್ಣಲು ಖದೀಮರ ಸಾಲೆ ಕೂತಿತ್ತು.

೪. ಒಡೆದು ಆಳುವ ನೀತಿ ಬಹುಷಃ ಬ್ರಿಟೀಷ್ರಿಗಿಂತ ನಮ್ಮ ನೆಹರೂರಲ್ಲೇ ತುಂಬಾ ಕಲೆಯಾಗಿ ಕೂತಿತ್ತು. ತಮ್ಮ ಕಾಲದಲ್ಲಿ ತಮ್ಮ ಎತ್ತರಕ್ಕೆ ಬೆಳೆಯುವ ಎಲ್ಲಾ ಅರ್ಹತೆ ಇದ್ದ ವಲ್ಲಭ ಭಾಯಿ ಪಟೇಲ್ ರನ್ನು ಗಾಂಧಿ ಜೊತೆಗೂಡಿ ಮೂಲೆ ಗುಂಪು ಮಾಡಿ, ಗಾಂಧೀ ಮರಣಾನಂತರ ನೇಪಥ್ಯಕ್ಕೆ ಸೇರುವಂತೆ ಮಾಡಿದರು. ನಂತರ "After Nehru:Who?" ಅನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿ ಜನತೆ ಉತ್ತರಿಸುವ ಮೊದಲೇ "Ofcourse, it is Indira!" ಎಂದು ಹೇಳಿ ಅಮೋಘ ಮುತ್ಸದಿ ಶಾಸ್ತ್ರಿಯವರನ್ನು ರಾಜಕೀಯವಾಗಿ ಮುಗಿಸಿದರು. ಗಾಂಧಿಯನ್ನು ಕೊಂದ ಗೋಡ್ಸೆಯ ಪರವಾಗಿ ವಾದಮಾಡಲು ಸಿದ್ದರಿದ್ದ ಅಂಬೇಡ್ಕರರನ್ನು ದಲಿತ, ಹಿಂದುಳಿದ ವರ್ಗಗಳ ನಾಯಕನಿಂದ ಮೇಲೇರುವ ಒಂದು ಅವಕಾಶವನ್ನು ನೆಹರು ಕೊಡಮಾಡಲಿಲ್ಲ. ಸ್ವಾತಂತ್ರ್ಯಗಳಿಸಲು ಮಡಿದ ಲಕ್ಷಾಂತರ ಜನರ ಪ್ರತಿನಿಧಿ ತಾನೆಂಬುದನ್ನು ಮರೆತು ಇಡೀ ದೇಶವನ್ನೇ ತಮ್ಮ ಮನೆಯ ಚಕ್ಕ-ಬಾರಾ ಆಡುವ ಆಟದ ಮನೆ ಎಂಬಂತೆ ನೋಡಿದರು.

ನಂತರದಲ್ಲಿ ಶುರುವಾದದ್ದೇ ನೆಹರೂರ ಕ್ಷಮಿಸಲಾಗದ ತಪ್ಪುಗಳಿಗೆ ತೇಪೆ ಹಚ್ಚುವ ಕೆಲಸ. ಇಂದಿರಾ ಆಳಿದ ಅಷ್ಟೂ ವರ್ಷಗಳ ಕಾಲ ಅವರಪ್ಪ ಮಾಡಿದ ತಪ್ಪುಗಳಿಗೆ ಬೆಲೆ ತೆತ್ತುತ್ತಲೇ ಹೋದರು.. ಬೆಲೆ ತೆರುವ ಭರದಲ್ಲಿ ಅಪ್ಪನ ಉತ್ತರಾಧಿಕಾರಿಯಾಗಿ ಅವರೂ emergency, ಸಂಜಯನ ಪುಂಡಾಟದೊಂದಿಗೆ ಭಾರತಕ್ಕೆ ಲಂಚಾವತಾರದ ಬೃಹತ್ ದರ್ಶನ ಮಾಡಿಸಿದರು. ಇಂದಿರೆಯ ಅಂಕ ಮೀರಿ ಬೆಳೆದ ಸಂಜಯ ಇಂದಿರೆಯ ಹೆಸರು ಮಾಸುವಷ್ಟು ಪ್ರಖ್ಯಾತನಾದ.ಉತ್ತಮ ಚಿಂತನೆಗಳಿದ್ದಾಗ್ಯೂ ಉತ್ತಮ ಮಾರ್ಗದರ್ಶನದ ಕೊರತೆಯಿಂದಾಗಿ ತನ್ನ, ತನ್ನಮ್ಮನ ಭವಿಷ್ಯಕ್ಕೆ ಎರವಾಗಿ ಎಲ್ಲ ಸರಿಯಾಯಿತೆನುವಾಗ ಕಾಣದ ಲೋಕಕ್ಕೆ ಹೊರಟೆ ಹೋದ. ನಂತರದ್ದು ಇಂದಿರಮ್ಮನ operation Blustar. ನಮ್ಮ ನೆಲದಲ್ಲಿ ಮತ್ತೊಂದು ಪಾಕಿಸ್ತಾನ ಹುಟ್ಟುವುದನ್ನು ತಡೆದ ಇಂದಿರಾ ನಂತರದಲ್ಲಿ ಸಿಕ್ಖರ ಗುಂಡಿಗೆ ಬಲಿಯಾಗಿಹೋದರು.
ಇಂಥಾ ದಾರುಣ ಭಾರತದ ಪಾಪದ ಕೊಡಕ್ಕೆ ತಮ್ಮ ಅಮೂಲ್ಯ ಸೇವೆಯನ್ನು ನೀಡಲು ನಂತರದಲ್ಲಿ ಬಂದಿದ್ದು ರಾಜೀವ್. ತೆಳ್ಳಗೆ ಬೆಳ್ಳಗೆ ಇಟಾಲಿಯನ್ ಹೆಂಡತಿ,ಮಕ್ಕಳೊಂದಿಗೆ ಹೊರಬಂದಾಗ ಭಾರತದ ಜನಕ್ಕೆ ಆತ ಇಂದಿರಾ ಮಗನಾಗಷ್ಟೇ ಕಂಡ. ವಂಶ ಬುದ್ದಿ ಹೋಗುವುದೆಲ್ಲಿಗೆ... ಸಂಪರ್ಕ ಕ್ರಾಂತಿ, ಮುಕ್ತ ಆರ್ಥಿಕತೆಯಂಥಾ ಉಪಯೊಂಗಗಳೊಂದಿಗೆ ಭಾರತಕ್ಕೆ ಬೋಫೋರ್ಸ್, ಹವಾಲ ಮುಂತಾದ ಹಗರಣಗಳ ಸರಮಾಲೆಯೂ ಗಂಟು ಬಿತ್ತು. ಜೊತೆ ಜೊತೆಗೆ ಸಂಜಯನ ಕಾಲದಲ್ಲಿ ಕಾಂಗ್ರೆಸ್ ಸೇರಿದ್ದ ಹೀನಾತಿಹೀನ ಸುಳ್ಳರು, ತಲೆ ಹಿಡುಕರು ಅಧಿಕಾರದ ಆಯಕಟ್ಟಿನಲ್ಲಿ ಜಮಾಯಿಸಿದ್ದರು.


ಭಾರತ ಇನ್ನು ಭಗವಂತ ಬಂದರೂ ಉಳಿಯದ ಸ್ಥಿತಿಗೆ ತಲುಪಿತ್ತು.

ನಂತರದಲ್ಲಿ ಸೋನಿಯಾ,ಧಮ್ಮಿಲ್ಲದ ಬಿ ಜೆ ಪಿ, ನಂತರದಲ್ಲಿ ಕಳ್ಳ, ಸುಳ್ಳ, ಕೊಲೆಗಡುಕ, ತಲೆ ಹಿಡುಕರಿಂದಲೇ ತುಂಬಿದ ಮೈತ್ರಿ ಕೂಟ, ಅದಕ್ಕೆ ಮತ್ತೆ ನಾಯಕಿ ಸೋನಿಯಾ. ದೇಶವೆಂಬ ರಂಗಸ್ತಳದಲ್ಲಿ ದಿನಕ್ಕೊಂದು ನಾಟಕ, ಹಚ್ಚಿದ ಬಣ್ಣ ಆರುವ ಮೊದಲೇ ಮತ್ತೊಂದು ನಾಟಕಕ್ಕೆ ಸಿದ್ದತೆ, ಮಧ್ಯದಲ್ಲಿ ನನ್ನದೆಲ್ಲಿ ಇಡ್ಲಿ ಅಂತ ಕುಯಿನ್ ಕುಯಿನ್ ಮಾಡುವ ನಮ್ಮ ಹೀನ ಸುಳಿ ದೇವೇಗೌಡ & ಕೋ, ತಾಯಿಗಂಡ ತನದ ಸಿ ಪಿ ಐ, ದಗಾಕೊರ ಕರುಣಾನಿಧಿ &ಕೋ, ಜಯಲಲಿತಾ & ಕೋ, ದಲಿತರ ರಕ್ತಹೀರಿ ಅದರಲ್ಲೇ ತನ್ನ ಬಾಳು ಕಂಡಿರುವ ಮಾನ ಎಂದರೇನು ಎಂದು ಅರಿಯದ ಮಾಯಾವತಿ &ಕೋ , ಕೇಡಿ ಲಾಲು &ಕೋ, ಇವರೆಲ್ಲರಲ್ಲೂ ಆಗಾಗ ಮೈತ್ರಿ ಎಂಬ ಸೋಗಿನಲ್ಲಿ ಸೆರಗು ಹಾಸಿ ಕೂರುವ ಕಾಂಗ್ರೆಸ್ಸ್ ಮತ್ತು ಬಿ ಜೆ ಪಿ ಎಂಬ ಜಾರಿಣಿಯರು ಎಲ್ಲ ತಮ್ಮ ವೈಯುಕ್ತಿಕ ಸುಖದಲ್ಲಿ ದೇಶ ಮರೆತರು. ಹೇಳಿ ಇಂಥಾ ದೇಶದಲ್ಲಿ ಕೊಲೆ, ಸುಲಿಗೆ, ಬಂದ್ ಬೇಡ ಬೇಡಾ ಅಂದರೂ ಹೇಗೆ ತಾನೇ ನಿಲ್ಲುತ್ತವೆ.

ಹೇಳಬಹುದು ದೇಶ ಉದ್ದಾರಕ್ಕೆ ನಮ್ಮ ಸಹಕಾರ ಬೇಕೇ ಬೇಕು ಅಂತ. ಸಹಕಾರ ಬಯಸಿದ ಸಂತೋಷ್ ಹೆಗಡೆಗೆ ಸಾರಿ ಕೇಳಿ ಮನ ಒಲಿಸಲಿಕ್ಕೆ ನಮ್ಮ ಯಡ್ಡಿ ಕೈಲಿ ಆಗದೆ ಗಡ್ಕರಿ ಬರಬೇಕಾಯ್ತು. ಆ ಮನುಷ್ಯನದೇ ಆ ಪಾಡಾದರೆ ಸಾಮಾನ್ಯನ ಗತಿ ಏನು.
ಈ ಕೆಳಕಂಡ Rules & Regulations ಕೂಡ ಮಾಡುವಷ್ಟು ಮಾನ, ಮರ್ಯಾದೆ, ಮನುಷ್ಯತ್ವ, ನಿಯತ್ತು, ಕಾಳಜಿ, Common sense, ದೇಶ ಋಣ, ನೈತಿಕತೆ ಕೂಡ ಇಲ್ಲವ ನಮ್ಮ ಹೊಲಸು ತಿನ್ನುವ ಅಧಿಕಾರಿಗಳಲ್ಲಿ?
೧. ದೇಶದ ತುಂಬೆಲ್ಲ 2ಡೇ ಪಕ್ಷ. ಒಂದು "ರೂಲಿಂಗ್ ಪಾರ್ಟಿ" ಮತ್ತೊಂದು " ವಿರೋಧ ಪಕ್ಷ". [ಬೇಕಿದ್ದವರು ರಾಜಕೀಯದಲ್ಲಿರಲಿ ಇಲ್ಲ ಅಂದ್ರೆ ತಿ-ಬಾ ಮುಚ್ಚಿಕೊಂಡು ಮನೆಯಲ್ಲಿರಲಿ]
೨. ಅಕ್ರಮ ಆಸ್ತಿ ಮಾಡುವ ಯಾರಿಗೇ ಆಗಲೀ ಕೆಳ ಕಂಡ ಶಿಕ್ಷೆ ವಿಧಿಸೋದು
ಅ. ಅವರ ಪಾಸಪೋರ್ಟ್, ಎಲೆಕ್ಷನ್ ಕಾರ್ಡ್, ರೇಶನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಮತ್ತು ಬ್ಯಾಂಕ್ ಅಕೌಂಟುಗಳನ್ನು ಶಾಶ್ವತವಾಗಿ ಮುಟ್ಟುಗೋಲು ಹಾಕಿಕೊಳ್ಳುವುದು.
ಆ. ಮಾಸಿಕ ಸಂಬಳ, ನಿವೃತ್ತಿ ಭತ್ಯೆ[ಪೆನ್ಶನ್] ಎಲ್ಲವನ್ನೂ ನಿಲ್ಲಿಸೋದು. [ಕೇಳಬಹುದು ಹೆಂಡತಿ ಮಕ್ಕಳು ಏನು ಮಾಡಬೇಕು ಅಂತ? ಮನೆ ಯಜಮಾನ ಆ ಕಾರ್ಯ ಮಾಡದಂತೆ ತಡೆವಲ್ಲಿ ಮನೆಯವರ ಪಾಲೂ ಇದೆ. ಯಾಕೆಂದರೆ ಎರಡು ಕೈ ಸೇರಿದರೆ ತಾನೇ ಚಪ್ಪಾಳೆ]
೩. ದೇಶದ್ರೋಹಿ ಕೆಲಸ ಮಾಡುವ ಯಾವ ಹಲ್ಕೆಟವರಿಗೇ [ಕಸಬ್, ಆಫ್ಜ್ಯಲ್, ನಕ್ಷಲ್, ಇವರಿಗೆ ಸಪೋರ್ಟ್ ನೀಡುವ ರಾಜಕಾರಣಿಗಳು, ಸ್ತಳೀಯರು] ಆಗಲಿ ಮುಲಾಜಿಲ್ಲದೆ ವಿಚಾರಣೆ ನಂತರ ಮರಣದಂಡನೆ ವಿಧಿಸುವುದು [ಇವಾಗ ಮಾಡುತ್ತಿರುವಂತೆ ಅಲ್ಲ, ಬಟಾ ಬಯಲಲ್ಲಿ ನೂರಾರು ಜನರನ್ನು ಕೊಂದ ಕಸಬ್ಗೆ ವ್ಯರ್ಥವಾಗಿ ವರ್ಷಪೂರ ವಿಚಾರಣೆ, ಅವನಿಗೆ ಜೈಲಿನಲ್ಲಿ ಬಿರ್ಯಾನಿ, ಎ ಸಿ ಸೇವೆ ಹೀಗಲ್ಲ]. ಬೇಕಿದ್ದರೆ ಇಸ್ರೇಲ್ ಸರ್ಕಾರದಿಂದ ನಮ್ಮ ಜನ ಟ್ರೈನಿಂಗ್ ತೆಗೆದುಕೊಳ್ಳಲಿ.
೪. ವರ್ಷಪೂರ್ತಿ ತರಬೇತಿ ನೀಡುವ commandoಗಳನ್ನ ದೇಶಸೇವೆಗೆ ಬಳಸಿಕೊಳ್ಳೋದು [ಸದ್ಯಕ್ಕೆ ಅವರುಗಳು ನಮ್ಮ ಮಾನಗೆಟ್ಟ ರಾಜಕಾರಣಿಗಳ ಮನೆ ಕಾಯುವ ನಾಯಿಗಳಾಗಿದ್ದಾರೆ Sorry to say this but it is the fact]

ಇಷ್ಟಾದರೆ ದೇಶದ ಅರ್ಧಕ್ಕರ್ದ ಸಮಸ್ಯೆ ತಾನಾಗೆ ಸರಿಹೋಗುತ್ತದೆ. ನಂತರದಲ್ಲೂ ಬಂದ್ ನ ಅವಶ್ಯಕತೆ ಬೇಕಾಗ ಬಹುದು [ಯಾಕಂದರೆ ರಾಮರಾಜ್ಯದಲ್ಲೂ ರಾಗಿ ಬಿಸೋದು ತಪ್ಪೋಲ್ವಂತೆ]. ಆಗ
೫. ಮುಷ್ಕರ ಯಾರ ವಿರುದ್ದವಿರುತ್ತದೋ ಅವರಿಗೆ ಮನ ಮುಟ್ಟುವಂತೆ ಮಾಡುವುದು. ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿತು ಅಂತ ಬಸ್ಸಿಗೆ ಬೆಂಕಿ, ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ರೈಲು ನಿಲ್ಲಿಸಿ ಗಂಟಲು ಹರಿದು ಕೊಂಡರೆ ಯಾರೇನೂ ಹೆಚ್ಚಿಸಿದ ಬೆಲೆ ಕಮ್ಮಿ ಮಾಡುವುದಿಲ್ಲ. ಇದು ನಗ್ನ ಸತ್ಯ ಕೂಡ. ಹಿಂದೆ ಇವೆಲ್ಲ ಆಗಿರುವಂಥದ್ದೆ. ಹಾಗೆ ವಿರೋಧವಿತ್ತು ಎಂದಾದಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಪಾರ್ಲಿಮೆಂಟಿಗೆ ಮುತ್ತಿಗೆ ಹಾಕಿ, ಮುಖ್ಯಮಂತ್ರಿ, ಪ್ರಧಾನಮಂತ್ರಿ ಮನೆ ಮುಂದೆ ಅಮರಣ ಉಪವಾಸ ಧರಣಿ ಕೂಡಿ.ಇಲ್ಲ... ಇಂಥದ್ದೆಲ್ಲ ನಮ್ಮ ನಾಯಕರಿಂದ ಆಗೋಲ್ಲ.. ಬಂದ್ಗೆ ಕರೆ ನೀಡಿ ಅವರೆಲ್ಲ ಎ ಸಿ ರೂಮಿನಲ್ಲಿ ಬಿರ್ಯಾನಿ, ಮೂಳೆ ತಿನ್ಕೊಂಡು ಕೂತಿರ್ತಾರೆ. ಇಲ್ಲಿ ಅವರಿಂದ ಪುಡಿಗಾಸು ಪಡೆದ ಬುದ್ದಿಗೇಡಿ ಜನ ಹುಯಿಲೆಬ್ಬಿಸಿ ಸಮಾಜದ ಸ್ವಸ್ತ್ಯ ಹಾಳು ಮಾಡ್ತಾರೆ. ಇಂಥಾ ಎಂಜಲು ನಾಯಿಗಳನ್ನು ಮುಖ ಮೂತಿ ನೋಡದೆ ಬಾರಿಸಿ ಅವರ ದನಿಯಡಗಿಸುವುದು. [ಅದನ್ನ ಬೇಕಾದರೆ ಚೀನಾ ಜನರಿಂದ ಕಲಿಯಲಿ, ಅವರು ಸ್ವಾತಂತ್ರವನ್ನ ದಮನ ಮಾಡ್ತಾರೆ, ನಾವು ಸಮಾಜದ ಕಳೆ ಕೀಳಲು ಅದನ್ನ ಬಳೆಸೋಣ]

ಊಪ್ಸ್, ತುಂಬಾನೆ ಬರೆದೆ ಅನ್ಸುತ್ತೆ.. ನಿಜ, ಏನ್ ಮಾಡೋದು ಅನಂತನ ಮೆಸೇಜ್ ನೋಡಿದಾಗ ಇಷ್ಟೆಲ್ಲಾ ಮನಸ್ಸಿನ್ನಲ್ಲಿ ಹಾಗೆ ಬಂದು ಹಗೆ ಹೋಯ್ತು, ಯಾಕೋ ನಿಮ್ಮೊಡನೆ ಹೇಳಿಕೊಳ್ಬೇಕು ಅನ್ನಿಸ್ತು. ಎಲ್ಲೋ ಒಂದು ಆಸೆ, ನಾನು ಹೇಳಿದ ಆ 4 ಅಂಶಗಳು ಒಂದಲ್ಲಾ ಒಂದು ದಿನ ನಮ್ಮ ದೇಶದಲ್ಲಿ ನಿಜವಾಗುತ್ತಾ ಅಂತ? ತುಂಬಾನೆ ಹೊತ್ತಾಯ್ತು. ಆಫೀಸ್ ಮಿಂಚೆಗಳು ದಂಡಿಯಾಗಿ ಬಿದ್ದಿವೆ. ನನ್ನ ಕೆಲಸ ನಾನು ಶುರು ಮಾಡ್ತೀನಿ. ಎಲ್ಲರೂ ತಮ್ಮ ತಮ್ಮ ಪಾಲಿನ ಕೆಲಸ ಸರಿಯಾಗಿ ಮಾಡಿದ್ರೆ ದೇಶದ ಕೆಲಸ ತಾನಾಗೆ ಶುರು ಆಗುತ್ತೆ ಅಲ್ವಾ?. :-)

ಯಾಕೋ ನಿಸಾರರ ಈ ಕವಿತೆ ಅಂದೂ-ಇಂದೂ ತುಂಬಾನೆ ಪ್ರಸ್ತುತ ಅನ್ಸುತ್ತೆ

ಕುರಿಗಳು ಸಾರ್ ಕುರಿಗಳು; ಸಾಗಿದ್ದೇ ಗುರಿಗಳು.ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ, ಹುಡುಕಿ ಹುಲ್ಲು ಕಡ್ಡಿ ಮೇವು, ಅಂಡಲೆಯುವ ನಾವು ನೀವು
ಕುರಿಗಳು ಸಾರ್ ಕುರಿಗಳು; ನಮಗೊ ನೂರು ಗುರಿಗಳು.

ನಮ್ಮ ಕಾಯ್ವ ಕುರುಬರು: ಪುಟಗೋಸಿಯ ಮೊನ್ನೆ ತಾನೆ ಕಿತ್ತು ಪಂಚೆಯುಟ್ಟವರು.
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು. ಜಮಾಬಂದಿಗಮಲ್ದಾರ ಬರಲು, ನಮ್ಮೊಳೊಬ್ಬನನ್ನ
ಮೆಚ್ಚಿ, ಮಸೆದ ಮಚ್ಚಹಿರಿದು ಕಚಕ್ಕೆಂದು ಕೊಚ್ಚಿ ಕತ್ತ, ಬಿರಿಯಾನಿಯ ಮೆಹರುಬಾನಿ ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ, ನುಡಿಗೆ ಬೆಣ್ಣೆ ಹಚ್ಚುವವರು. ಬಿಸಿಲಲ್ಲಿ ನಮ್ಮದೂಡಿ, ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು: ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು ಬಿಡದ ಹಾಗೆ ಸವರಿ ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ಮಾರಮ್ಮನ ಮುಡಿಗೆ ಕೆಂಪು ದಾಸವಾಳ ಆಯುವವರು ಬೆಟ್ಟಾ ದಾಟಿ ಕಿರುಬ ನುಗ್ಗು, ನಮ್ಮೊಳಿಬ್ಬರನ್ನ ಮುಗಿಸಿ,
ನಾವು 'ಬ್ಯಾ, ಬ್ಯಾ' ಎಂದು ಬಾಯಿ ಬಾಯಿ ಬಡಿದುಕೊಂಡು ಬೊಬ್ಬೆ ಹಾಕುತಿದ್ದರೂ
ಚಕ್ಕಭಾರ ಆಟದಲ್ಲೆ ಮಗ್ನರು ಇವರೆಲ್ಲರು- ನಮ್ಮ ಕಾಯ್ವ ಗೊಲ್ಲರು.ಕುರಿಗಳು ಸಾರ್ ಕುರಿಗಳು


Source: http://vivekabharata.net/

Monday, June 28, 2010

ಈಶ್ವರ ಅಲ್ಲಾ ಈ ಜನರಿಂದ ದೇಶನ ಕಾಪಾಡಪ್ಪ...


ನಾಯಿಕಡಿತ

ಯಪ್ಪಾ,
ಈ so called ಬುದ್ದಿ[ಮೊದ್ದು] ಜೀವಿಗಳಿಗೆ ಏನಾದ್ರೂ ಹುಚ್ಚುನಾಯಿಯೋ, ರೇಬಿಸ್ ನಾಯಿಯೋ ಕಚ್ಚಿದ್ಯೇನೋ ಕೊಂಚ ಪರೀಕ್ಷೆ ಮಾಡಬೇಕಲ್ಲ!!??... ಮಾಡೋಕ್ಕೆ ಊರ್ ತುಂಬಾ ಕೆಲಸ ಇದೆ. ಡೀಸೆಲ್, ಪೆಟ್ರೋಲ್ ತುಟ್ಟಿ ಆಗ್ತಿದೆ, ಮೂರೂ ಬಿಟ್ಟು ಕಕ್ಕ ತಿನ್ನಲಿಕ್ಕೆ ಕೂತಿರೋ ನಮ್ಮ ಹೇಸಿಗೆ ಯಡ್ಡಿ ಸರ್ಕಾರ ಸಂತೋಷ್ ಹೆಗಡೆಯವರ ಜೊತೆ ಆಡಬಾರದ ಆಟ ಆಡ್ತಿದೆ, ಯಡ್ಡಿ ಅಂಡ್ ಗ್ಯಾಂಗ್, ಸೋನಿಯಾ ಅಂಡ್ ಗ್ಯಾಂಗ್ ಓಸಾಮನ ಅಣ್ಣ-ತಂಗೀರ್ ತರಹ ದೇಶ ಹಾಳ್ ಮಾಡ್ಬೇಕು ಅಂತಾನೆ ದೇಶದ ಹೆಸರಿನಲ್ಲಿ ಸಂಸತ್ತಿನಲ್ಲಿ ಕೂತಿದ್ದಾರೆ, ನಮ್ ಬೃಹನ್ನಳೆ ಚಿದಂಬರಂ ಊರ್ ಹಾಳಾದಮೇಲೆ ಕೂಡ ಬಾಗಿಲು ಮುಚ್ಚೋಕೆ ರೆಡಿ ಇಲ್ಲ. ಇನ್ನೂ ಪಾಕ್ ಜೊತೆ ಸಂಧಾನ, ನಕ್ಸಲ್ ಜೊತೆ ಮಾತು-ಕತೆ ಅಂತ ಹೊಲಸು ಹೇಳಿಕೆ ಕೊಡ್ತಾ ಇದ್ದಾರೆ. ತಿನ್ಲಿಕ್ಕೆ ಇಲ್ದೆ ದಿನ ಜನ ಸಾಯ್ತಿದ್ರೂ ಸಾನಿಯಾ ಮೂಗುತಿ 2 ಲಕ್ಷ, ಶಿಲ್ಪಾ ಶೆಟ್ಟಿ ಮದುವೆ ಸೀರೆ 50 ಲಕ್ಷ, ಮಾಡಿನ ಮೇಲೆ ಬೆಕ್ಕಿನ ರಾಣಿ ಅಂತೆಲ್ಲ ಅಸಂಬದ್ದ ಬ್ರೆಕಿಂಗ್ ನ್ಯೂಸ್ ಕೊಡೊ ಮೀಡಿಯಾ ಜನ, ಮಾತಾಡ್ಲಿಕ್ಕೆ ಅಂತ, ಸುಧಾರ್ಸ್ಲಿಕ್ಕೆ ಅಂತ ಏನೇನ್ ಇದೆ. ಅದೆಲ್ಲ ಬಿಟ್ಟು "ಹೋಗಿ ಬಂದು ಹೋಗಿ ಬಂದು ಮೂಗೀನೆ ..." ಅನ್ನೋ ಹಾಗೆ ಈ ಗೋವಿಂದ್ ರಾವ್, ಅನಂತ್ ಮೂರ್ತಿ& ಕೋ ಯಾಕೆ ನಿದ್ದೆಲೂ, ಸಂಡಾಸಲ್ಲೂ , ಬೀದಿ ಬೀದಿಯಲ್ಲೂ ಹರುಕು ಬಾರಿ ಮಾಡಿ ಜನ ಸೊಂಟದ್ ಕೆಳಗಿನ ಭಾಷೇಲಿ ಬಯ್ಯೋದನ್ನ ಕೇಳಿ ಕುಶಿಪಡ್ತಾರೋ ಆ ಕಕ್ಕ ಪರಮಾತ್ಮನಿಗೆ ಗೊತ್ತು!!

Friday, February 19, 2010

ಕೃಷ್ಣ ಇಲ್ಲಿ ಸ್ಥಿತಿ ರಕ್ಷಕ, ಬುದ್ದ ಸ್ಥಿತಿ ಸಂಯೋಜಕ




ಮೊದಲಿಂದಲೂ ಕೊಂಚ ಹಾಗೆಯೇ!!! ಒಂದೇ ನಾಣ್ಯದ ಎರಡು ಮುಖದಂತಿರುವ ಈ ಇಬ್ಬರಲ್ಲೂ ತಮ್ಮದೇ ಆದ ಸಾಧು ಸಾಧು ಅನ್ನುವಷ್ಟು ಪ್ರಾತ್ಯೇಕಿಕ ಉಪಮಾನ. ಮದುವೆಯಾಗಿ ಮಕ್ಕಳು-ವಂದಿಗರಾದ ಮೇಲೆ ಮರೆತಿದ್ದ ಮೋಕ್ಷದ ಬೆನ್ನು ಹತ್ತಿದ ಬುದ್ದ, ಊರಿಗೆಲ್ಲ ಮೋಕ್ಷದ ಗುಟ್ಟು-ರಟ್ಟು ಮಾಡಿ ತಾನೇ ಮೊಕ್ಷವಿಲ್ಲದೆ ಸತ್ತ ಕೃಷ್ಣ ಇವತ್ತಿಗೂ ನನ್ನ ಊಹೆಗೆ ನಿಲುಕದ ವ್ಯಕ್ತಿತ್ವಗಳು. ಇಬ್ಬರಲೂ ಕೊಂಚ ಹೆಚ್ಚೇ ಅನ್ನುವ ಒಳ್ಳೆಯ ಗುಣಗಳಿತ್ತು.... ಛೆ! ಛೆ!! ಹೀಗೇಕೆ ಅಂತ ಕೇಳುವ ಕೆಟ್ಟ[?] ಗುಣಗಳೂ ಇದ್ವು. ಜಗತ್ತಿದೆ ಶಾಂತಿ ಭೋದಿಸಿ ಜಗತ್ತಿನ ಶಾಂತಿ ಕೆಡಿಸಿದ ಬುದ್ದನ ಹಾಗು ಜಗತ್ತಿಗೆ ಸಮರದ ಪಾಠ ತಿಳಿ ಹೇಳಿ ಅದಕ್ಕೊಂದು ಚವ್ಕಟ್ಟನಿಡದ ಕೃಷ್ಣನ ಕುರಿತು ನನ್ನ ಮನದ ತುಮುಲವೇ ಈ ಅಂಕಣ. ಇದು ನನ್ನ ಸ್ವಗತವಷ್ಟೇ.... ಯಾರಿಗೋ ಹೇಳುವ, ಕಾಲೆಳೆಯುವ ಹುನ್ನಾರವಿಲ್ಲ... ಬುದ್ದನ ಆಣೆ, ಕೃಷ್ಣನ ಪ್ರಾಮಿಸ್.

ಯಾರಿಗೆ ತಿಳಿದಿಲ್ಲ ಈ ಇಬ್ಬರ ಜೀವನ ಚರಿತ್ರೆ...? ಹುಟ್ಟುತ್ತಲೇ ಪರಾವಲಂಬಿಯಾಗಿ ಪರರ ಸುಖದಲ್ಲೇ ಸುಖ ಕಂಡು ಪರಮಾತ್ಹ್ಮನಾದ ಕೃಷ [ಜೈಲಿಂದ ಪಾರಾರಿ, ಬೃಂದಾವನದ ಮುರಾರಿ, ಗೋಕುಲವಾಸಿ, ಕಂಸ ವಧೆ, ಅನರ್ತ ಪಯಣ, ರಾಧೆಯ ಪ್ರೇಮ-ಪ್ರಸಂಗ, ಕುರುಕ್ಷೇತ್ರ, ಪಾಂಡವ ಪಕ್ಷಪಾತಿ,ಯಾದವಿ ಕಲಹ, ದಾರುಣ ಅಂತ್ಯ], ಹಾಗೂ ಸುಖದ ಆಸೆಯಲ್ಲೇ ದುಖದ ಸೆಲೆ..So, ಆಸೆಯ ಮಾಯಾಜಿಂಕೆಯ ಬೆನ್ನೇರುವ ಉತ್ಕಟೆಯೇ ಬೇಡವೆಂದು ಬುದ್ದ [ರಾಜ ಜೀವನ, ವೈಭವೊಪಿತ ಮದುವೆ, ಪುಟ್ಟ ಕಂದ, ಜಗತ್ತು ಮಲಗಿದಾಗ ಅವನೊಬ್ಬ ಎದ್ದ, ಒಬ್ಬನೇ ಮನೆಯಿಂದ ಹೊರಬಿದ್ದ, ಮೊಕ್ಷದೊಡನೆ ಆದ ಬುದ್ದ, ನಂತರ ಧರ್ಮ ಪ್ರಸಾರ, ನಿರ್ವಾಣ]. ಎಲ್ಲರೂ ಕೇಳಿದ್ದೆ, ತಿಳಿದಿರುವಂಥದ್ದೆ, ವಿಶೇಷ ಇರುವುದು ಅವರು ಪ್ರತಿಪಾದಿಸಿದ ತತ್ವಗಳಲ್ಲಿ, ಬಾಳಿದ ಆದರ್ಶದಲ್ಲಿ.

ಅನ್ಯಾಯವೆಂದು ತಿಳಿದೂ ಸಂಧಿ ಕಾರ್ಯಕ್ಕಾಗಿ ಧುರ್ಯೋಧನನಲ್ಲಿಗೆ ಹೋಗಿ ಉಪಯೋಗವಿಲ್ಲದೇ ಹಿಂತಿರುಗಿ ಶುರುವಾದ ಕುರುಕ್ಷೇತ್ರದ ಆರಂಭದಲ್ಲೇ ಅರ್ಜುನ ಸ್ವಕುಟುಂಬ-ಬಂಧು-ಗುರುಗಳಾದಿಗಳ ಮೇಲೆ ಯುದ್ದ ಮಾಡಲು ಒಲ್ಲೆನೆಂದು ಈ ಕಾರಣ ಕೊಡುತ್ತಾನೆ.
ಅರ್ಜುನ:" ಕೃಷ್ಣ, ಎಂಥಾ ಹೀನ ಕೆಲಸ ಮಾಡುತ್ತಿದ್ದೇನೆ, ರಾಜ್ಯದಾಸೆಗಾಗಿ ನನ್ನ ಅಣ್ಣ-ತಮ್ಮ-ಗುರುಗಳು ಬಂಧು ಬಾಂಧವರನ್ನೇ ಕೊಲ್ಲಹೊರಟಿದ್ದೇನೆ. ಇಂಥಾ ನೀತಿವಂಥರನ್ನು ಕೊಂದು ನಾನು ಗೆದ್ದರೂ ಎಲ್ಲಾ ಪಡೆದು ಸೋಲುನ್ಡಂತೆ ಅಲ್ಲವೇ? ಅಪಾರ ಜೀವ ಹಾನಿಯಾಗಿ ಗೆದ್ದವರು ಸೋತವರ ಹೆಣ್ಣುಗಳನ್ನು ಕೂಡುವುದು.. ಇಲ್ಲಾ ಕಾಮದಾಸೆಗೆ ಬಲಿಯಾಗಿ ಗೆದ್ದವರ ಪತಿವಿಯೋಗಿತ ಹೆಣ್ಣುಗಳೇ ಪರ ಗಂಡಸಿನ ಸಂಗಕ್ಕೆ ಹಾತೊರೆಯುವುದು.. ಒಟ್ಟಿನಲ್ಲಿ ವರ್ಣಸಂಕುಲ ಘಟಿಸುತ್ತದಷ್ಟೇ. ನನಗೆ ಯುದ್ದ ಬೇಡ.. ನಾನು ನಿವೃತ್ತನಾಗುತ್ತೇನೆ".
ಈಗ ಕೃಷ್ಣ ನಿಜವಾದ ನಿಷ್ಪಕ್ಷಪಾತ, ಬದುಕಿನ ಪೂರ್ಣ ಗ್ರಹಿಕೆ, ಅನುಭವದ ಉಚ್ಚ ಮಟ್ಟದಲ್ಲಿ ನಿಂತು ಅವನನ್ನು ಎಚ್ಚರಿಸುತ್ತಾನೆ [ಗಮನಿಸಿ, ಎಚ್ಚರಿಸುತ್ತಾನಷ್ಟೇ, ಹೀಗೇ ಮಾಡು, ಇದೇ ದಾರಿ, ಇದಿಲ್ಲದಿದ್ದರೆ ನಿಂಗೆ Life ಇಲ್ಲಾ .. You are finished ಅಂತೆಲ್ಲ ಹೆದರಿಸೋಲ್ಲ.. He gives options].
ಕೃಷ್ಣ: ಅರ್ಜುನ, ನಿನ್ನ ಪ್ರತಿಪಾದನೆಯೇ ವಿಚಿತ್ರ,.. ಗುರು ಹಿರಿಯರೆಲ್ಲ ನೀತಿವಂತರು ಅನ್ನುತ್ತೀಯ, ಹಾಗಾದರೆ ಅವರೆಲ್ಲರೂ ಧುರ್ಯೋಧನನಿಗೆ ಒತ್ತಸೆಯಾಗಿದ್ದರೆ ಅಂದ ಮೇಲೆ.. ಅವರು ನ್ಯಾಯದ ಕಡೆಗಿದ್ದಾರೆಂದೇ ಅರ್ಥ... ಅಂದ ಮೇಲೆ ಧುರ್ಯೋದನ ಹೇಳಿದ್ದು ಸರಿಯೇ.. ನೀವೆಲ್ಲ ಪಾಂಡುವಿನ ಮಕ್ಕಳಲ್ಲ. ಮಾದ್ರಿ ಕುಂತಿಯರಿಗೆ ಹಾದರಕ್ಕೆ ಹುಟ್ಟಿದವರು.., ನ್ಯಾಯ ರಕ್ಷಣೆಗಾಗಿ ಮಹಾಯುದ್ದಗಳಾಗುವುದು, ಜನ ಸಾಯುವುದು, ನೀನು ಹೇಳಿದಂತೆ ವರ್ಣಸಂಕುಲವಗುವುದು ಸಹಜವೇ,. ಮುಖ್ಯ ನ್ಯಾಯದ್ದು. ನೀನು ಯುದ್ದ ಮಾಡದಿದ್ದರೂ ನಿನ್ನ ಅಣ್ಣ ತಮ್ಮಂದಿರು ಮಾಡುತ್ತಾರೆ, ದುಷ್ಟದ್ಯುಮ್ನ ಮಾಡುತ್ತಾನೆ, ನಿನ್ನ ಕಡೆ ಇರುವ ಅತಿರಥ ಮಹಾರಥರು ಮಾಡುತ್ತಾರೆ.. ನೀನು ಬೇಕಾದರೆ ಮನೆಯಲ್ಲಿ ಕುಳಿತು ಧರ್ಮ ವ್ಯಾಖ್ಯಾನ ಮಾಡು".
ಅಷ್ಟೇ, ಅರ್ಜುನ ತನ್ನ ಮನಸ್ಥಿತಿ ಬದಲಾಯಿಸಿ ಯುದ್ದಕ್ಕೆ ಅಣಿಯಾಗುತ್ತಾನೆ. ನ್ಯಾಯಪರತೆಯ ಕಟೋರತೆ ಇರುವುದೇ ಇಲ್ಲಿ.ಗಮನಿಸಬೇಕಾದ ಒಂದು ಮಹತ್ವಪೂರ್ಣ ಅಂಶವೆಂದರೆ ಇಲ್ಲಿ ಮಾನವೀಯ ಸಂಬಂಧಗಳಿಗೆ ಎಡೆಯಿಲ್ಲ, ಅಧರ್ಮ ಮಾಡಿದವರು ಬಂಧುಗಳೇ ಆದರೂ ಅವರಿಗೆ ಶಿಕ್ಷೆ ಶತಃಸಿದ್ಧ ಎಂಬ ಸಂದೇಶ. ಅರ್ಜುನನಿಗೆ, ನಿನಗಾಗಿ ಹೋರಾಡು ಎನ್ನೋದಿಲ್ಲ. ರಾಜ್ಯಕ್ಕಾಗಿ ಬಡಿದಾಡು ಅನ್ನೋಲ್ಲ, ನ್ಯಾಯಕ್ಕಾಗಿ ಹೋರಾಡು ಅನ್ನುತಾನೆ. ಸೋಲು ಗೆಲುವು ನಿನ್ನದಲ್ಲ ಅಂದ ಮೇಲೆ ನಿನ್ನವರು ತನ್ನವರೆಂದು ಕಾಯುವುದರಲ್ಲಿ ಅರ್ಥವಿಲ್ಲ ಎನ್ನುತ್ತಾನೆ. ನಿನ್ನ ಕರ್ಮವನ್ನು ನೀನು ಮಾಡ ಬಹುದು..ಅದರ ಫಲದ ಮೇಲೆ ನಿನ್ನ ಹಿಡಿತವಿಲ್ಲ ಅಂತ ಎಚ್ಚರಿಸುತ್ತಾನೆ. ಅಂತೆಯೇ ಮಾನವನ ವರ್ಗವನ್ನು ಅವನ ದುಡಿಮೆಯ ಆಧಾರದಲ್ಲಿ ಕೃಷ್ಣನೇ ವಿಂಗಡಿಸುತ್ತಾನೆ. ವಿದ್ಯೆಯನ್ನು ಭೋಧಿಸುವನು ಬ್ರಾಹ್ಮಣ, ಕಾಯುವನು ಕ್ಷತ್ರಿಯ, ಮಾರುವನು ವೈಶ್ಯ ಇವರೆಲ್ಲರಿಗೂ ಸಹಾಯಕನಾಗಿ ಸಮಾಜದ ಆಧಾರ ಸ್ಥಂಬವಾಗಿರುವ ಶೂದ್ರ. ಬ್ರಾಹ್ಮಣ ಮಗ ಹುಟ್ಟು ಬ್ರಾಹ್ಮಣನಲ್ಲ ಎಂಬ ಸೈದ್ಧಾಂತಿಕ ನಿಲುವನ್ನ ಕೃಷ್ಣ ವ್ಯಕ್ತಪಡಿಸುತ್ತಾನೆ. [ಅರ್ಥ ತಿಳಿಯದ ಹಲವು ಗೊಡ್ಡು ಬ್ರಾಹ್ಮಣರು ಸ್ವಾರ್ಥ ಸಾಧನೆಗೆ ತಮ್ಮದೇ ಒಂದು ಅರ್ಥ ಸೃಷ್ಟಿಸಿದರು, ನೀತಿ ತಿಳಿಯದ ಈ ಹೊಲಸು ರಾಜಕೀಯ ಜನರು ಅದನ್ನೇ ಮುಂದುವರೆಸಿದ್ದಾರೆ]

ಒಮ್ಮೆ ಭಗವದ್ಗೀತೆಯನ್ನ ಓದಿ... ಕೃಷ್ಣನ ಇಂಥ ಹತ್ತು ಹಲವು ವಾಣಿಗಳು ನಿಮಗೆ ಸಿಗುತ್ತವೆ, ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ ನ ಚೈನಂ ಕ್ಲೇದಯಂತ್ಯಾಪೋ ನ ಶೋಷಯತಿ ಮಾರುತಃಆತ್ಮವನ್ನು ಶಸ್ತ್ರವು ಕಡಿಯಲಾರದು, ಬೆಂಕಿ ಸುಡಲಾರದು ಮತ್ತು ಗಾಳಿಯು ಒಣಗಿಸಲಾರದು. ಶರೀರ ಒಮ್ಮೆ ಗಳಿತವಾದ ನಂತರ ಅದು ಇನ್ನೊಂದು ದೇಹವನ್ನು ಪ್ರವೆಸಿಸುತ್ತದೆ. ಇಂಥಾ ಕ್ಷಣಿಕ ದೇಹದಲ್ಲಿ ಉಂಟಾದ ಮಮತೆಯಿಂದ ನೀನು ಧರ್ಮ ಬಾಹಿರನಾಗಬೇಕಾಗಿಲ್ಲ. ...ಒಂದು ಮಾತನ್ನ ನೀವಿಲ್ಲಿ ಗಮನಿಸಬೇಕು, ಧರ್ಮಕ್ಕಾಗಿ ಸ್ವಂತ ಅಣ್ಣ-ತಮ್ಮನನ್ನೇ ಕೊಲ್ಲು, ಬಂಧುಗಳನ್ನೇ ಬಲಿ ನೀಡು ಎನ್ನುವ ಇಸ್ಲಾಂ ವಾಕ್ಯದ "ಧರ್ಮಕ್ಕೂ"..ಕೃಷ್ಣನ ಧರ್ಮದ ವ್ಯಾಖ್ಯಾನಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇಸ್ಲಾಮಿನ ಧರ್ಮಕ್ಕಾಗಿ ಬಲಿ ತತ್ವ ಒಂದು ಪಂಗಡಕ್ಕಾದರೆ ಕೃಷ್ಣನ ಧರ್ಮಕ್ಕಾಗಿ ಬಲಿ ಕೇವಲ ನೀತಿಗೆ, ನ್ಯಾಯಕ್ಕೆ.

ಮಾನವೀಯ ಸಂಬಂಧಗಳ ಬಗ್ಗೆ ಬಂದಾಗ, ಶ್ರೀಕೃಷ್ಣನು ತನ್ನ ಪರಿಪೂರ್ಣತೆಯನ್ನು ಮರೆಯುತ್ತಾನೆ...ಕಾಮದಲ್ಲಿ ಹೇಗೆ ಯಾವುದೂ ನಿಷಿದ್ದವಲ್ಲವೋ ಹಾಗೆ ಮನುಷ್ಯ ಪ್ರೇಮದಲ್ಲೂ ಯಾವುದೂ ವರ್ಜ್ಯವಲ್ಲೆಂದು ಹೇಳಿ ಹಾಗೆ ಬಾಳುತ್ತಾನೆ. ಸಕಲ ಪುರುಷಾರ್ಥಗಳಲ್ಲೂ ಕೃಷ್ಣ ಮೆರೆಯುತ್ತಾನೆ. ಅವನ ಬಾಲ್ಯದ ತುಂಟಾಟಗಳು ಯಾರಿಗೆ ತಾನೇ ಪ್ರಿಯವಲ್ಲ? ಯವ್ವನದ ಕೃಷ್ಣನ ತೂಕ ಭರಿತ ಪ್ರೇಮ ಸುಧೆ ಇಂದಿಗೂ ಮಾನವರೆದೆಯಲ್ಲಿ ಹರಿಯುತಲಿದೆ. ಗೃಹಸ್ಥನಾಗಿ ಪರಿಪೂರ್ಣತೆಯ ಮೂರ್ತಿಯಾಗಿ ಪಾಂಡವರು ತಮ್ಮ ಸಹೋದರರನ್ನು, ಅಜ್ಜ, ಗುರು ಮತ್ತಿತರ ಬಂಧು ಬಾಂಧವರನ್ನು ಕೊಲ್ಲಲು ಪ್ರೇರಣೆಯಾಗಿದ್ದು, ಅದೇ ಬಾಂಧವ್ಯದಲ್ಲೇ ದ್ರೌಪದಿಯ ವಸ್ತ್ರಾಪಹರಣ ತಡೆದಿದ್ದು,ಅಂತಃಕರಣದಲ್ಲಿ ಕುಚೆಲನೊಡನೆ ಬೆರೆತದ್ದು...ಜನಸಾಮಾನ್ಯರಂತೆ ಹಲವರು ಹೆಂಡಿರ ಮುದ್ದಿನ ಗಂಡನಾಗಿ ಪಾಡುಪಟ್ಟಿದ್ದು, ಹೀಗೇ ಹತ್ತು ಹಲವು ಎಡೆಯಲ್ಲಿ ಕೃಷ್ಣ ನಮಗೆ ಗೋಚರಿಸುತ್ತಾನೆ. ನಮ್ಮಲ್ಲಿ ನಮ್ಮವನಾಗುತ್ತಾನೆ.. ನಮ್ಮವನಾಗುತ್ತಲೇ ನಾನು ನಿಮ್ಮನ್ಥಲ್ಲ.. ನೀವು ನನ್ನಂತಾಗಬೇಕೆಂಬ ಹಂಬಲವನ್ನ ನಮ್ಮಲ್ಲಿ ತುಂಬುತ್ತಾನೆ.. ಬದುಕೆಂಬ ಕಾಮನಬಿಲ್ಲಿನಲ್ಲಿ ಏಳೂ ಬಣ್ಣಗಳ ಮಹತ್ವವನ್ನ ಅವನದೇ ಹಾದಿಯಲ್ಲಿ ತಿಳಿಸುತ್ತಾನೆ. ಕೃಷ್ಣ ಒಂದು ಸಾಗರ. ಅವನಲ್ಲಿ ಎಲ್ಲವೂ ಇದೆ. ದಡದ ತಟದಲ್ಲಿ ಕಿಲ ಕಿಲ ನಲಿದಾಡುವ ಎಳೆ ಅಲೆ, ಪ್ರಶಾಂತ, ಗಾಂಭೀರ್ಯ, ರೌದ್ರ, ಅಂತರ್-ಪ್ರವಾಹ, ಜೀವ ಸೆಲೆ ಎಲ್ಲಾ ಎಲ್ಲಾವೂ ಇದೆ. ಸಮಸ್ತ ಜೀವಿಗಳಿಗೆ ಬೇಕಾದ ಸಮಸ್ತವೂ ಆ ಸಾಗರದಲ್ಲಿದೆ.

ಆದರೆ ಬುದ್ದನಲ್ಲಿ ನಿಮಗೆ ಈ ಪರಿಯ Varity ಕಾಣುವುದಿಲ್ಲ...ಏಕೆಂದರೆ ಒಬ್ಬ ಸಾಕಾರದ ಕುರುಹಾದರೆ, ಮತ್ತೊಬ್ಬ ನಿರಾಕಾರದ ಪ್ರತಿವಾದಿ. ಜೀವನ ಸ್ಪೂರ್ತಿಯನ್ನು ನಿರಾಕರಿಸುತ್ತಲೇ ಜೀವನವನ್ನ ಪ್ರೀತಿಸುವ ಅಮೋಘ [ ದ್ವಂದ್ವ!!?] ನೀತಿಯಲ್ಲಿ ಬುದ್ದ ಮುನ್ನೆಡೆಯುತ್ತಾನೆ. ಜೀವ ಸೆಲೆ ಆಸೆಯೇ ದುಃಖಕ್ಕೆ ಮೂಲವೆಂದು ಆಸೆಯನ್ನು ಒಂದೇ ಕ್ಷಣದಲ್ಲಿ ಜರಿದು ಉಗಿದು ಉಪ್ಪುಹಾಕುತ್ತಾನೆ. ಆಸೆಗೂ ಹಲವು ಮಜಲಿದೆಯೇಂಬ ನಗ್ನ ಸತ್ಯ ಬುದ್ದನಿಗೆ ಅರ್ಧ ಸತ್ಯದಂತೆ ಗೋಚರಿಸಿದ್ದು ನಿಜಕ್ಕೂ ಆಶ್ಚರ್ಯವೇ ಸರಿ. ಬದುಕಲ್ಲಿ ಅಸೆಯ ಚಿಲುಮೆ ಎಂದೆಂದೂ ಬತ್ತಬಾರದು ಎಂಬ ಕೃಷ್ಣನ ಸಿದ್ದಾಂತಕ್ಕೆ ಬುದ್ದ ಅಪವಾದವೆಂಬಂತೆ ಮೂಡುತ್ತಾನೆ. ಬುದ್ದನ ಸಿದ್ದಾಂತಗಳೇ ಕೊಂಚ ವಿಚಿತ್ರ ಎನ್ನಿಸುತ್ತವೆ. ಜೀವನದ ಎಲ್ಲಾ ಮಜಲುಗಳು ಆಸೆಯಿಂದ ಸುತ್ತುವರೆದಿವೆ... ಆಸೆಯ ಸೆಲೆ ಎಲ್ಲಿಗೇ ಒಯ್ದರೂ ಅದರ ಅಂತ್ಯ ದುಖ್ಖದ ಸಾಗರವೇ. So, ಬುದ್ದ ಹೇಳುತ್ತಾನೆ ಆಸೆಯೇ ಬೇಡ... ಸಮಸ್ತ ಸಾಕಾರತೆಯನ್ನೇ ತ್ಯಜಿಸಿ ನಿರಾಕಾರಿಗಳಾಗೋಣ. ಬುದ್ದನ ಈ Simple pricipled ಜೀವನ ಜನ ಸಾಮಾನ್ಯರಿಗೆ ತುಂಬಾನೆ ಇಷ್ಟ ಆಯಿತು. ಸರಳ ಸಿದ್ದಾಂತಗಳನ್ನ ಮತ್ತಷ್ಟು ಸರಳವಾಗಿ ತಿಳಿಸಿದ ಕ್ಷಣದಿಂದಲೇ ಜನ ಸಾಮಾನ್ಯರಲಿ ಸಾಮಾನ್ಯರಾಗುವ ಪಣತೊಟ್ಟರು. ಜೀವದ ಸೆಲೆ "ಆಸೆ" ಬತ್ತತೊಡಗಿತು. ಎಲ್ಲೆಲ್ಲೂ ಬೌದ್ದ ಭಿಕ್ಷುಗಳೇ.. ಭಾರತದಲ್ಲಿ ಹೊರಳುತ್ತಾ.. ತೆವಳುತ್ತಿದ್ದ ಬೌದ್ದಧರ್ಮ ಉಚ್ರಾಯ ಹಂತ ತಲುಪಿದ್ದು, ಅದಕ್ಕೆ ಹೊಸ ಆಯಾಮ ಕೊಟ್ಟ ಸಾಮ್ರಾಟ ಅಶೋಕನಿಂದಲೇ. ಅಖಂಡ ಸ್ಪೂತಿಯಿಂದಲೇ, ಜಗತ್ತನೇ ಗೆಲ್ಲುವ ಭರವಸೆಯೊಂದಿಗೆ ದಂಡಯಾತ್ರೆಮಾಡುತ್ತಾ, ಭಾರತದ ಉದ್ದಗಲಕ್ಕೂ ತನ್ನ ಖಡ್ಗ ಝಾಳಪಳಿಸುತ್ತಾ ವೀರ್ಯಮೆರೆಯುತ್ತಿದ್ದ ಅಶೋಕನ ಜೀವನ ಸೆಲೆಯನ್ನು ಸನ್ಯಾಸತ್ವದ ಬರಡು ಭೂಮಿಗೆ ಹರಿಸಿದ್ದೆ ಒಬ್ಬ ಬುದ್ಧನಿಂದ inspired ಆದ ಭಿಕ್ಷುವಿನಿಂದ . ಕೆರಳಿದ ಸಿಂಹ ಅಶೋಕ ಸಾಕ್ಷಾತ್ಕಾರದ ರಾಜ್ ಕುಮಾರ್ ಆಗಿದ್ದು ಆಗಿನಿಂದಲೇ. ರಾಜನ ಧರ್ಮ ಆಳುವುದು. ಚಾಣಕ್ಯನ ಕೈ ಕೆಳಗೆ ಪಳಗಿದ ಅಶೋಕನ ತಾತ ಚಂದ್ರಗುಪ್ತ ಮೌರ್ಯ ಕೊನೆಗಾಲದಲ್ಲಿ ಸ್ವೀಕರಿಸಿದ ಬೌಧ ಧರ್ಮವನ್ನು ನಿರ್ವೀರ್ಯಧರ್ಮವೆಂದು ಜರಿದ್ದಿದ್ದ ತರುಣ ಅಶೋಕನಿಗೆ ಅರ್ಥಪೂರ್ಣವಾಗಿ ಆಳುವ ನೀತಿ ಹೇಳಿದ್ದರೆ ಸಾಕಿತ್ತು. ಭಾರತದ ಇತಿಹಾಸಕ್ಕೊಂದು ಹೊಸ ಆಯಾಮ ಬರುತ್ತಿತ್ತು. ಆದರೆ ಬೌಧಧರ್ಮ ಸೇರಿದ ಅಶೋಕ ಬುದ್ದನ ಅಣತಿಯಂತೆ ಸನ್ಯಾಸಿಯಾದ... ಧರ್ಮ ಪ್ರಸಾರ ನಡೆಸಿದ.. ತನ್ನ ಮಕ್ಕಳನ್ನೂ ಧರ್ಮಪ್ರಸಾರಕ್ಕಚ್ಚಿದ. ರಾಜನಾಗಿಯೂ, ಜನರಕ್ಷಕನಾಗಿಯೂ ಮಾಡಬಹುದಾಗಿದ್ದ ಸಾಲು ಮರಗಳನ್ನು ನೆಡುವುದು, ರಸ್ತೆಯ ಅಭಿವೃದ್ದಿ, ಅನಾಥರ ಸೇವೆ, ಜನಸೇವೆ, bla bla bla.. ಎಲ್ಲವನ್ನು ಸನ್ಯಾಸಿಯಾಗಿ ಮಾಡಿದ. ರಾಜನಾಗಿ ರಾಜ್ಯಕ್ಕೆ ಕಟ್ಟಬೇಕಾದ ಜನಬಲವನ್ನು ಸೈನ್ಯಬಲವನ್ನಾಗಿಸದೆ ಸನ್ಯಾಸಿಗಳ ಬಲವಾಗಿಸಿದ. ಧರ್ಮದಲ್ಲಿ ಮೆರೆದ ಮಗಧ ರಕ್ಷಣೆಯಲ್ಲಿ ಸೊರಗತೊಡಗಿತು. ಅಲೆಕ್ಸಾಂಡರನ್ನು ಬೆದರಿ ಹಿಂತಿರುಗುವಂತೆ ಮಾಡಿದ್ದ ಮಗಧದ ಸೈನ್ಯವನ್ನ ಕೇವಲ 2 ತಲೆಮಾರಿನಲ್ಲಿ ಬೌದ್ದಧರ್ಮದ confusing ನಿರಾಕಾರ ತತ್ವ ನಿರ್ವೀರ್ಯವನ್ನಾಗಿಸಿತ್ತು. ನೀವೇ ಊಹಿಸಿ, ಅಶೋಕನ ನಂತರ ಅಶೋಕನ ಸಂತತಿಯವರೇ ಅಶೋಕನಷ್ಟೇ ಮುತುವರ್ಜಿಯಿಂದ ರಾಜ್ಯವಾಳಿದ್ದರೆ ಭಾರತ ಅಖಂಡವಾಗಿರುತ್ತಿತ್ತು. ಅರಬರ ದಾಳಿ, ಭಾರತದಲ್ಲಿ ಮುಘಲರು, ನಮ್ಮ ನೆರೆಯಲ್ಲಿ ಪಾಕಿಸ್ತಾನ.. ಎಲ್ಲ ಇರುತ್ತಲೇ ಇರಲಿಲ್ಲ... ಯಾರಿಗೆ ಗೊತ್ತು ಗಾಂಧಾರವನ್ನೇ[Quandhar] ತನ್ನ ಗಡಿ ಮಾಡಿಕೊಂಡಿದ್ದ ಅಶೋಕ ರಾಜನಾಗೆ ಉಳಿದಿದ್ದರೆ ಅರಬ್ ದೇಶವನ್ನೂ ತನ್ನ ಕಕ್ಷೆಗೆ ತೆಗೆದುಕೊಳ್ಳುತ್ತಿದ್ದನೋ ಏನೋ!!! ಎಲ್ಲ ಒಂದು "ರೆ" ಪ್ರಪಂಚವಷ್ಟೇ. ಒಟ್ಟಿನಲ್ಲಿ ಶಾಂತಿಯ ಹರಿಕಾರ ಬುದ್ದ ಭಾರತದ ಶಾಂತಿ ಕದಡಿದ್ದರಲ್ಲಿ ತನ್ನ ಪಾಲೂ ತೆಗೆದುಕೊಂಡ.
ಬುದ್ದನ ನಂತರದ ಭಿಕ್ಷುಗಳು ಬುದ್ದ ಹೀಗೆಳೆದ ವೈದಿಕ ಧರ್ಮದ ಕವಲುಗಳನ್ನೇ ತಮ್ಮ ನೆಲೆಗಳನ್ನಾಗಿಸಿದರು. ಬುದ್ದ ತೆಗಳಿದ ವೇದಗಳ ಸಾರದಲ್ಲೇ ತಮ್ಮ ತಮ್ಮದೇ ಆದ ಸಿದ್ಧಾಂತಗಳು ರೂಪಗೊಳ್ಳತೊಡಗಿದವು. ವೈದಿಕ ಧರ್ಮದ ಯಾವ ಅಂಶಗಳ ವಿರುದ್ದ ಸಿಡಿದೆದ್ದು ಬೌದ್ದಧರ್ಮದ ತಿರುಳನ್ನು ರಚಿಸಲಾಗಿತ್ತೋ ಅವೇ ಅಂಶಗಳಾದ ನಿರಂಕುಶ ಪ್ರಭುತ್ವ, ಅಧಿಕಾರ ದಬ್ಬಾಳಿಕೆ, ಧರ್ಮದ ಹೆಸರಲಿ ಅನಾಚಾರ ಎಲ್ಲವೂ ಬೌದ್ದರಲ್ಲೂ ಕಾಣಿಸಿಕೊಂಡವು. ನಾಳಂದ, ತಕ್ಷಶಿಲ, ಒಜೋದನ್ತಪುರಗಳಂಥ ಮಹಾ ವಿದ್ಯಾಲಯಗಳ ಪ್ರಕಾಶದಲೂ ಬೌದ್ದಧರ್ಮದ ಹುಳುಕುಗಳು ಎದ್ದೆದ್ದು ಕಾಣುತ್ತವೆ.
ಭಾರತಕ್ಕೆ ಹೊಸ ಭಾಷ್ಯ ಬರೆದ ಕೃಷ್ಣ.. ಭಾರತದ ಇತಿಹಾಸಕ್ಕೆ ನವ್ಯ ವ್ಯಾಖ್ಯಾನ ಬರೆದ ಬುದ್ದ.. ಅವರ ಸಿದ್ದಾಂತ... ಸಾಧನೆ ಎಲ್ಲವೂ ಅರಬರ ದಾಳಿಯೊಂದಿಗೆ ಕೊಚ್ಚಿ ಹೋದವು. ಏಕ ದೇವ ನಾಮ ಹಲವು ಎಂದಿದ್ದ ವೈದಿಕತೆಯನ್ನ ನಿರಾಕರಿಸಿದ ಬುದ್ದ... ದೇವರಿಲ್ಲ... ಮಾನವತೆ, ಶಾಂತಿಯೇ ನಮ್ಮೊಳಗಿನ ದೇವರೆಂದು ಸಾರಿದ.. ಹೀಗಂದ ಬುದ್ದನನ್ನೇ ದೇವರಾಗಿಸಿದ ಬೌದ್ದರು[ಬ್ರಾಹ್ಮಣರಂತೆ] ತಮ್ಮ ಬೇಳೆಕಾಳುಗಳನ್ನು ಬೇಯಿಸಿಕೊಂಡರು. ನಂತರದಲ್ಲಿ ತಿಂದು ಕೊಬ್ಬಿದ್ದ ಇವರ ಅಂಡುಗಳಿಗೆ ಒದ್ದು ಬುದ್ದಿ ಹೇಳಲು ಪರಕೀಯರ ಪ್ರವೇಶವಾಯಿತು.

ನಂತರದ್ದು ಎಲ್ಲರಿಗೂ ತಿಳಿದದ್ದೇ.. ಶ್ರೀಮಾನ್ ಎಸ.ಎಲ್. ಭೈರಪ್ಪನವರ ಆವರಣ ಹಾಗು ಧರ್ಮಶ್ರೀ ಓದಿದರೆ ಸಾಕು ಕ್ರಿ.ಶ ೮ನೆ ಶತಮಾನದಿಂದ ೨೧ನೆ ಶತಮಾನದವರಗೆ ಭಾರತದ ಧಾರ್ಮಿಕ ಹೆಜ್ಜೆಗಳ ಗುರುತುಗಳ ಅನಾವರಣವಾಗುತ್ತದೆ. "ಸಾರ್ಥ"ವನ್ನು ಓದಿದ ನಂತರ ಯಾಕೋ ಹೀಗೆಲ್ಲ ಮನಸಿಗೆ ಅನ್ನಿಸಿತು.. ಹುಚ್ಚು ಮನಸ್ಸಿನ ಲಹರಿಯನ್ನ ಹತ್ತು ಹಲವು ಕಡೆ ಓಡಿಸಿ ಹಲವು ಸಾಲುಗಳನ್ನು ಕನವರಿಸಿದ್ದೇನೆ.

"ಧರ್ಮ ಎನ್ನುವುದು ಕೆಲವು ನಂಬಿಕೆ, ನಿಯಮ, ಆಚರಣೆಗಳಿಂದ ಕೂಡಿದ ಜೀವನ ಪದ್ಧತಿ. ಯಾವುದನ್ನು ವ್ಯಕ್ತಿ ಜೀವನದಲ್ಲಿ ನಂಬಿ ಅಳವಡಿಸಿಕೊಳ್ಳೂತ್ತಾನೋ ಅದೇ ಅವನ ಧರ್ಮ. ಇದು ಹುಟ್ಟಿನಿಂದ ಬರುವಂಥದ್ದಲ್ಲ ಎಂದು ನನ್ನ ಅನಿಸಿಕೆ." ಅದು ಊಟಕ್ಕೆ ಉಪ್ಪಿನ ಕಾಯಿಯಾಗಿರಬೇಕೆ ಹೊರಟು ಅದೇ ಊಟವಾಗಬಾರದು". ಆ ತರಹದ ಮರೀಚಿಕೆಯನ್ನ ಸೃಷ್ಟಿಸಿಯೇ ನಮ್ಮ ಧರ್ಮದ ಸಾರವನ್ನ ನಾವು ಕಳೆದು ಕೊಂಡೆವು.

"Religion is the reason The world is breaking up into peices".

ನಿಮ್ಮ
ಅವೀನ್

Tuesday, January 12, 2010

ಹಿ ಹಿ ಹಿ... Joke of the Century....


ಭಗವಂತಾ...
ಸಿಂಗಾಪುರನ ಒಂದು ದಿನದಲ್ಲಿ ಬೆಂಗಳೂರ್ ಮಾಡುವ ತಾಕತ್ತಿರುವ ಗೌಡರಿಗೆ ಯಾಕಪ್ಪ ಇಷ್ಟೊಂದು ಹಾಸ್ಯ ಪ್ರಜ್ಞೆ ಇಟ್ಟಿದ್ದೀಯ?