ಆಸ್ತಿಕರ ಅನನ್ಯ ಆಸ್ತಿ, ನಾಸ್ತಿಕರ ನಿರಾಕರಣದ ಮುಕುಟ "ಗಣು ಮಾಮನ" ಹಬ್ಬ ಮತ್ತೊಮ್ಮೆ ಜನಮಾನಸದ ಮನದಂಗಳದಲ್ಲಿ. "Blasphemy"ಹೆಸರಿನಲ್ಲಿ ಜಗತ್ತೆಲ್ಲಾ ಹೊತ್ತಿ ಉರಿಯುತ್ತಿರುವ ವೇಳೆಯಲ್ಲಿ ಭಾವನೆಗಳ ಎರಕದಲ್ಲಿ ಮಿಂದೆದ್ದ ಗಣಪ.
ಮತ್ತೆಂದೂ ಮಹಾಭಾರತದ Sequels ಆಗಲಿ Prequels ಆಗಲಿ ಬರೆಯನೆಂದು ವೇದವ್ಯಾಸರಿಗೆ ಸೆಡ್ಡು ಹೊಡೆದು ಕೆರಳಿದ ಸಿಂಹದಂತಿರುವ ಮಕ್ಕಳ ಗಣು ಮಾಮ, ಯುವಕರ "ಗಣೇಶ ಬಪ್ಪ ಮೊರಯಾ", ಹಿರಿಯರ ಗಣೇಶಪ್ಪ ಇಂದಿನಿಂದ ದಿನಗಳ ಲೆಕ್ಕದಲ್ಲಿ ನಮ್ಮೊಡನೆ ನಮ್ಮವನಾಗಿ ನಮ್ಮ ಅನುಕೂಲಕ್ಕೆ ತಕ್ಕಂತೆ ತೃಪ್ತನಾಗಿ ಹರಸುವ ಸುವರ್ಣಕಾಲ.
ದೇವರ ಹೆಸರಿನಲ್ಲಿ ಹೃದಯದ ಬಾಗಿಲಿಗೆ ಬೀಗಗಳನ್ನು ಬಡಿದು ಪರಸ್ಪರ ಯುದ್ದ ಸಾರಿರುವ ಮನುಕುಲಕ್ಕೆ ಗಣು ಮಾಮ ಸೌಹಾರ್ದತೆಯ ನೈತಿಕ ಪಾಠ ಹೇಳುವ ಸಮಯ ಬಂದಿದೆ. ಕೇಳುವ ತಾಳ್ಮೆ ನಮ್ಮಲ್ಲಿರಬೇಕಷ್ಟೇ!!
1 comment:
Right! Ganumama refuses to write any more! Beautiful cartoon.
Post a Comment